- Advertisement -
- Advertisement -
ಮೈಸೂರು; ಈ ಬಾರಿಯ ಮೈಸೂರು ದಸರಾ ಅತ್ಯಂತ ಸುಂದರ ಹಾಗೂ ಸಂತೋಷದ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ನಾಡಹಬ್ಬ ದಸರಾ ಮಹೋತ್ಸವ 2022ಕ್ಕಾಗಿ ಕಾಡಿನಿಂದ ನಾಡಿಗೆ ಬಂದಿದ್ದ ಆನೆ ಲಕ್ಷ್ಮೀ ಮೈಸೂರು ಅರಮನೆ ಆವರಣದಲ್ಲೇ ಗಂಡು ಮರಿಗೆ ಜನ್ಮ ನೀಡಿದ್ದಾಳೆ.ಈ ಮೂಲಕ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ತಂದೆಯಾಗಿದ್ದಾನೆ.
ಹೊಸ ಅತಿಥಿಯ ಆಗಮನದಿಂದಾಗಿ ಈ ಬಾರಿ ದಸರೆಯಲ್ಲಿ 14 ಅಲ್ಲ 15 ಆನೆ ಪಾಲ್ಗೊಂಡಂತಾಗಿದೆ. ಅರಮನೆಯ ಕೋಡಿ ಸೋಮೇಶ್ವರ ದೇಗುಲ ಬಳಿ ಮರಿಗೆ ಲಕ್ಷ್ಮೀ ಜನ್ಮ ನೀಡಿದ್ದು, ತಾಯಿ ಹಾಗೂ ಮರಿ ಆನೆ ಇಬ್ಬರೂ ಆರೋಗ್ಯವಾಗಿದ್ದಾರೆ.
- Advertisement -