ಬೆಳ್ಳಾರೆ; ಕೆರೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುರುಳ್ಯ ಗ್ರಾಮದ ಅಲೇಕಿ ಎಂಬಲ್ಲಿ ನಡೆದಿದೆ. ಅಲೇಕಿ ಚೆನ್ನಪ್ಪ ಗೌಡ ಎಂಬವರ ಪುತ್ರ ರವಿಚಂದ್ರ(40) ಆತ್ಮಹತ್ಯೆಗೆ ಶರಣಾದ ಯುವಕ.
ಪುತ್ತೂರಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ರವಿಚಂದ್ರ ಅವರು ನಿನ್ನೆ ಸಂಜೆ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ತಾಯಿ ಮಾತ್ರ ಇದ್ದರು ಎನ್ನಲಾಗಿದೆ. ಸಂಜೆ 4 ಗಂಟೆ ವೇಳೆಗೆ ತಾಯಿಯ ಬಳಿ ರೋಗ ಇರುವ ಅಡಿಕೆ ಮರಗಳ ಬುಡಕ್ಕೆ ಮೈಲುತುತ್ತು ಹಾಕೋದಾಗಿ ಹೇಳಿ ಕೇಳಿ ತೆಗೆದುಕೊಂಡು ಹೋಗಿದ್ದರು. ಹಾಗೇ ಹೋದವರು 6 ಗಂಟೆ ಆದರೂ ಬಾರದೇ ಇರೋದನ್ನು ಗಮನಿಸಿದ ತಾಯಿ ಹುಡುಕಿಕೊಂಡು ಹೋಗಿದ್ದಾರೆ. ಬಳಿಕ ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದ್ದಾರೆ.
ಬಳಿಕ ಅಕ್ಕಪಕ್ಕದ ಮನೆಯವರೊಂದಿಗೆ ಅಲ್ಲೇ ಇದ್ದ ಕೆರೆಯೊಂದರ ಬಳಿ ಹುಡುಕಿಕೊಂಡು ಹೋದಾಗ ಅವರ ಚಪ್ಪಲಿ, ಮದ್ಯದ ಬಾಟಲಿ ಹಾಗೇ ಮೈಲುತುತ್ತು ಪತ್ತೆಯಾಗಿದೆ. ಬಳಿಕ ಕೆರೆಗೆ ಹಾರಿರೋದು ಖಚಿತವಾಗಿದೆ. ಬಳಿಕ ಮೃತದೇಹವನ್ನು ಶವಪರೀ7ೆಗೆ ಕಳುಹಿಸಲಾಯಿತು. ಇಂದು ಅವರ ಅಲೇಕಿ ಮನೆಗೆ ತಂದು ಶವಸಂಸ್ಕಾರ ನೆರವೇರಿಸಲಾಯಿತು.
ಇನ್ನು ರವಿಚಂದ್ರ ಅವರ ತಂದೆಯೂ ಅನಾರೋಗ್ಯದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮೃತ ರವಿ ಅವರು ಪತ್ನಿ,ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.