- Advertisement -
- Advertisement -
ಬ್ರಹ್ಮಾವರ: ಉಪ್ಪೂರು ಕೆ.ಜಿ. ರೋಡ್ ಬಳಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತಗ್ಗುಪ್ರದೇಶಕ್ಕೆ ಉರುಳಿಬಿದ್ದ ಘಟನೆ ನಡೆದಿದೆ .
ಒಂದೇ ಕುಟುಂಬದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರು ಕುಂದಾಪುರದ ದೇವಸ್ಥಾನಕ್ಕೆ ಭೇಟಿ ನೀಡಿ ಉಡುಪಿಗೆ ವಾಪಾಸಾಗುತ್ತಿದ್ದರು.
ಈ ವೇಳೆ ಉಪ್ಪೂರಿನ ಕೆ ಜಿ ರೋಡ್ ಬಳಿ ಈ ಅಪಘಾತ ನಡೆದಿದೆ . ಹೆದ್ದಾರಿಯಿಂದ ಉರುಳಿ ಬಿದ್ದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ . ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .
- Advertisement -