- Advertisement -
![]()
- Advertisement -
ಮರ್ದಾಳ: ನೀರಾಜೆ ಕ್ರಾಸ್ ಸಮೀಪ ಬುಧವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿ ಚರಂಡಿಗೆ ಬಿದ್ದ ಪರಿಣಾಮ ಚಾಲಕ ಗಾಯಗೊಂಡ ಘಟನೆ ನಡೆದಿದೆ.
ನೆಕ್ಕಿಲಾಡಿ ಗ್ರಾಮದ ಡೆಪ್ಪುಣಿ ನಿವಾಸಿ ಕುಶಾಲಪ್ಪ ಗಾಯಗೊಂಡ ಚಾಲಕನಾಗಿದ್ದು, ಕಡಬದಿಂದ ಮರ್ದಾಳ ಕಡೆಗೆ ತೆರಳುತ್ತಿದ್ದ ಕಾರು ರಸ್ತೆಯ ಎಡ ಬದಿಗೆ ಬಿದ್ದಿದೆ.
ಘಟನೆಯಲ್ಲಿ ಚಾಲಕನ ತಲೆಗೆ ಗಾಯವಾಗಿದ್ದು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿಗೆ ಸಂಪೂರ್ಣವಾಗಿ ಹಾನಿಯಾಗಿದೆ.
- Advertisement -


