ಕುಂದಾಪುರ: ವ್ಯಕ್ತಿಯೊಬ್ಬರ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ ಹೆಚ್ಚುವರಿ ವರದಕ್ಷಿಣೆ ಪಡೆದಿರುವುದಾಗಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಪ್ರೇಮಿ ಬರೆಟ್ಟೋ ಎಂಬವರು ಪೊಲೀಸರಿಗೆ ದೂರು ನೀಡಿದ್ದು , ಅದರಂತೆ ಪ್ರೇಮಿ ಬರೆಟ್ಟೋ ಅವರು ಸಲಾಂ ತೊಟ್ಟಿಲ್ ಎಂಬಾತನೊಂದಿಗೆ 2003 ರ ಅ . 25 ರಂದು ವಿವಾಹವಾಗಿದ್ದರು.
ವಿವಾಹ ಪೂರ್ವದಲ್ಲಿ ಸಲಾಂ ವರದಕ್ಷಿಣೆಗಾಗಿ ರ 6,00,000 ರೂ . ಬೇಡಿಕೆ ಇಟ್ಟಿದ್ದರಂತೆ. ಅದರಂತೆ 3,00,000 ರೂ . ಹಣವನ್ನು ದೂರುದಾರರ ಮನೆಯವರು ನೀಡಿದ್ದಾರೆ . ಈ ನಡುವೆ 2010 ರಲ್ಲಿ ದೂರುದಾರರು ಉದ್ಯೋಗದ ನಿಮಿತ್ತ ಇಸ್ರೇಲ್ ಹೋಗಿದ್ದು , ಊರಿಗೆ ವಾಪಾಸ್ಸು ಬಂದ ವೇಳೆ ಪತಿ ಸಲಾಂ ಹೆಚ್ಚಿನ ವರದಕ್ಷಿಣೆ ಗಾಗಿ ಮದ್ಯಪಾನ ಮಾಡಿಕೊಂಡು ಬಂದು ದೂರುದಾರರಿಗೆ ಹೊಡೆದು ಹಲ್ಲೆ ಮಾಡಿರುವುದು ಮಾತ್ರವಲ್ಲದೆ 5 ಲಕ್ಷ ರೂ ವನ್ನು ಹೆಚ್ಚಿನ ವರದಕ್ಷಿಣೆ ಪಡೆದಿರುತ್ತಾನೆ.
ಈ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .