ಕರಾವಳಿ ಸೊಗಡಿನ ಕಾಂತಾರ ಸಿನಿಮಾ ರಿಲೀಸ್ ರಾಜ್ಯಾದ್ಯಂತ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಓ ಎಂಬುದು ಚೆನ್ನಾಗಿ ತಲೆಯಲ್ಲಿ ಉಳಿಯತ್ತದೆ. ಈ ಪದವನ್ನು ಎಲ್ಲರೂ ಹೇಳುತ್ತಿದ್ದಾರೆ. ಆದ್ರೆ ಇದು ದೈವದ ಮಾತು. ಇದನ್ನು ಜನಸಾಮಾನ್ಯರು ಸುಮ್ಮನೆ ಹೇಳುವಂತಿಲ್ಲ. ಈ ಬಗ್ಗೆ ರಿಷಭ್ ಶೆಟ್ಟಿ ನೇರವಾಗಿ ಮಾತನಾಡಿದ್ದಾರೆ. ಜೊತೆಗೆ ಓ ಎಂದು ಕೂಗಿ ದೈವಕ್ಕೆ ಅವಮಾನ ಮಾಡಬೇಡಿ ಎಂದು ರಿಷಬ್ ಸಂದೇಶ ರವಾನಿಸಿದ್ದಾರೆ.
ದೈವ ಆರಾಧನೆ ಮಾಡುವುದು ನಮ್ಮ ಸಂಸ್ಕೃತಿ. ನಮ್ಮ ಮಣ್ಣಿನ ಕಥೆ. ಈ ಜನಪದ ಅನ್ನೋದು ಮಕ್ಕಳಿಗೆ ತಲುಪಬೇಕು. ನಿಮ್ಮ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಬನ್ನಿ. ಇದು ಕೇವಲ ಸೌತ್ಗೆ ಸೇರಿದ ಸಿನಿಮಾ ಅಂತಲ್ಲ. ಎಲ್ಲರಿಗೂ ಸೇರಬೇಕಾದ ಸಿನಿಮಾ. ಸಿನಿಮಾ ನೋಡಿ ಬಂದು ಹೊರಗಡೆ ಎಲ್ಲರೂ ಓ ಎಂಬ ಪದವನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಿದ್ದಾರೆ. ಇದನ್ನು ಮಾಡಬೇಡಿ. ಸುಮ್ ಸುಮ್ನೆ ಆ ಪದ ಬಳಸಬೇಡಿ. ಇದು ಬೇರೆ ಸಿನಿಮಾದ ಡೈಲಾಗ್ನಂತಲ್ಲ. ಅದಕ್ಕೆ ಒಂದು ಬೆಲೆ ಇದೆ ಎಂದು ರಿಷಭ್ ಶೆಟ್ಟಿ ಲೈವ್ ಬಂದು ಸಂದೇಶ ಕೊಟ್ಟಿದ್ದಾರೆ.