- Advertisement -
- Advertisement -
ಮಣಿಪಾಲ: ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪರಸ್ಪರ ತಬ್ಬಿಕೊಂಡಿದ್ದು ಈ ಬಗ್ಗೆ ಸಚಿವ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಅವರಿಬ್ಬರದ್ದು ಬಲಾತ್ಕಾರದ ಆಲಿಂಗನ. ಹಾಗಾಗಿ ಯಾವಾಗ ಡೈವರ್ಸ್ ಆಗುತ್ತೋ ಗೊತ್ತಿಲ್ಲ ಎಂದು ಇಂಧನ ಸಚಿವ ಸುನಿಲ್ ಹೇಳಿದ್ದಾರೆ.
ಮಣಿಪಾಲದಲ್ಲಿ ಮಾತನಾಡಿದ ಅವರು ಆಲಿಂಗನ ಸಹಜವಾಗಿರಬೇಕು.ಪರಸ್ಪರ ಒಪ್ಪಿಗೆಯಿಂದ ಕೂಡಿರಬೇಕು.ಆದರೆ ಅವರಿಬ್ಬರದ್ದು ಯಾರದೋ ಬಲಾತ್ಕಾರದಲ್ಲಿ ಮಾಡಿರುವಂತಹ ಅಲಿಂಗನ. ಹಾಗಾಗಿ ಯಾವಾಗ ಡೈವರ್ಸ್ ಆಗುತ್ತೋ ಗೊತ್ತಿಲ್ಲ ಎಂದು ಹೇಳಿದರು.
- Advertisement -