- Advertisement -
- Advertisement -
ಬ್ರಹ್ಮಾವರ: ಉದ್ಯೋಗವಿಲ್ಲದೆ ಮಾನಸಿಕವಾಗಿ ಕುಗ್ಗಿದ್ದ ಯುವಕನೊಬ್ಬ ದೇವಸ್ಥಾನದ ಸರೋವರಕ್ಕೆ ಹಾರಿ ತನ್ನ ಜೀವನವನ್ನು ಕಳೆದುಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಪಾಂಡೇಶ್ವರ ಯಡಬೆಟ್ಟು ನಿವಾಸಿ ಸುನಿಲ್ ಮೊಗವೀರ ಎಂದು ಗುರುತಿಸಲಾಗಿದೆ. ಸುನಿಲ್ ಮೊಗವೀರ ಸಾಲಿಗ್ರಾಮದ ಗುರುನಾಶಸಿಂಹ ದೇವಸ್ಥಾನದ ನೀರಿಗೆ ಹಾರಿದ್ದಾರೆ.
ಯುವಕ ಗುರುನರಸಿಂಹ ದೇಗುಲಕ್ಕೆ ಬಂದು ದೇವಾಲಯದ ಒಳಗಿದ್ದ ದೇವರಿಗೆ ಪೂಜೆ ಸಲ್ಲಿಸಿ, ಕಬ್ಬಿಣದ ಬೇಲಿಯನ್ನು ಹಾರಿ ಹೊರಗೆ ಬಂದು ಸರೋವರಕ್ಕೆ ಧುಮುಕಿದ್ದಾನೆ. ಈತ ಜಿಗಿಯುವುದನ್ನು ಕಂಡ ಸ್ಥಳೀಯರು ಕೂಡಲೇ ಆತನ ಪ್ರಾಣ ಉಳಿಸಲು ಯತ್ನಿಸಿದರಾದರೂ ರಕ್ಷಿಸಲು ವಿಫಲರಾದರು.
ಸುನೀಲ್ ಕೂಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳಿಂದ ಕೆಲಸ ಸರಿಯಾಗಿ ಸಿಗದೇ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಕೋಟ ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದು, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತಿದ್ದಾರೆ.
- Advertisement -