Friday, May 3, 2024
Homeತಾಜಾ ಸುದ್ದಿಪೈಗಂಬರ್ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟರೆ ಹಿಂಸಾಚಾರಕ್ಕೆ ತಿರುಗುತ್ತೀರಿ..!? ದೈವ ದೇವರುಗಳನ್ನು ನಿಂದಿಸುವುದು ಎಷ್ಟು ಸರಿ?...

ಪೈಗಂಬರ್ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟರೆ ಹಿಂಸಾಚಾರಕ್ಕೆ ತಿರುಗುತ್ತೀರಿ..!? ದೈವ ದೇವರುಗಳನ್ನು ನಿಂದಿಸುವುದು ಎಷ್ಟು ಸರಿ? ವಿರೋಧದ ಪ್ರತಿಭಟನೆ ಮಾಡಿದ್ದಕ್ಕೆ ಕುವೈಟ್‌ನಿಂದ ಗಡಿಪಾರು..!

spot_img
- Advertisement -
- Advertisement -

ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ನೀಡಿದ್ದ ಹೇಳಿಕೆ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಸಾಕಷ್ಟೂ ಸುದ್ದಿಯಾಗುತ್ತಿದೆ. ಹಿಂದೂ ಮುಸ್ಲಿಂಮರ ನಡುವೆ ಈ ರೀತಿಯ ಕಿತ್ತಾಟ ಇಂದು ಮೊನ್ನೆಯದಲ್ಲ. ಆದರೆ ವಿವಿಧತೆಯಲ್ಲಿ ಏಕತೆ ಎಂದು ಸಾರುವ ದೇಶದಲ್ಲಿ ಈಗ ಗಲಭೆಗಳೇ ಜಾಸ್ತಿಯಾಗುತ್ತಿದೆ. ಈ ಮೊದಲು ಅನ್ಯಧರ್ಮೀಯರು ಹಿಂದೂ ದೇವಾನು ದೇವತೆಗಳ ಬಗ್ಗೆ ಅವಹೇಳನ ಮಾಡಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‍ ಶರ್ಮ ಪೈಗಂಬರ್‍ ಬಗ್ಗೆ ಹೇಳಿಕೆ ಕೊಟ್ಟಿದ್ದರು.

ನೂಪುರ್ ಶರ್ಮ ಹೇಳಿಕೆ ಖಂಡಿಸಿ ಕುವೈಟ್ ನಲ್ಲಿ ವಿದೇಶಿಗರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದೀಗ ಪ್ರತಿಭಟನೆಯಲ್ಲಿ ಭಾಗವಹಿಸಿದ ಅನಿವಾಸಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಕುವೈಟ್ ಸರಕಾರ ಆದೇಶಿಸಿದೆ. ಶುಕ್ರವಾರ ಫಹಾಹೀಲ್ ಎಂಬಲ್ಲಿ ನೂಪುರ್ ಶರ್ಮಾ ಅವರ ಹೇಳಿಕೆ ಖಂಡಿಸಿ ಭಾರತೀಯರು ಸೇರಿದಂತೆ ಕುವೈಟ್ ನಲ್ಲಿ ಕೆಲಸಕ್ಕೆ ಆಗಮಿಸಿದ ಹಲವು ಮಂದಿ ಪ್ರತಿಭಟನೆ ನಡೆಸಿದ್ದರು.

ಆದರೆ ಕುವೈತ್‌ನಲ್ಲಿ ವಲಸಿಗರಿಂದ ಧರಣಿ ಅಥವಾ ಪ್ರತಿಭಟನೆಗಳನ್ನು ಆಯೋಜಿಸಬಾರದು ಕಾನೂನು ಮತ್ತು ನಿಬಂಧನೆಗಳು ಇದೆ. ಹೀಗಾಗಿ ಕಾನೂನಿ ಉಲ್ಲಂಘಿಸಿದ ಕಾರಣ ಅವರನ್ನು ಗಡೀಪಾರು ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಪ್ರತಿಭಟನೆಯ ಭಾಗವಾಗಿರುವ ಅನಿವಾಸಿಗಳು ಮುಂದೆ ದೇಶಕ್ಕೆ ಪ್ರವೇಶಿಸುವುದನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ವರದಿಯಾಗಿದೆ. ಕುವೈತ್‌ನಲ್ಲಿರುವ ಎಲ್ಲಾ ವಲಸಿಗರು ಕುವೈತ್ ಕಾನೂನುಗಳನ್ನು ಗೌರವಿಸಬೇಕು ಮತ್ತು ಯಾವುದೇ ರೀತಿಯ ಪ್ರದರ್ಶನಗಳಲ್ಲಿ ಭಾಗವಹಿಸಬಾರದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೂ ನೂಪುರ್‍ ಶರ್ಮಾ ಹೇಳಿಕೆಯ ಪರ ಅನೇಕರು ಧ್ವನಿ ಎತ್ತಿದ್ದಾರೆ. ವಿದೇಶದಲ್ಲಿಯೂ ಈ ಬಗ್ಗೆ ಪರ ವ್ಯಕ್ತವಾಗಿದೆ. ಹಿಂದೂ ದೇವರನ್ನು, ಹಿಂದೂಗಳನ್ನು ಕೆಟ್ಟದ್ದಾಗಿ ಈ ಹಿಂದೆ ಅನೇಕರು ಬಿಂಬಿಸಿದ್ದರು. ಆಗೆ ಈ ಬಗ್ಗೆ ಹಿಂದೂಗಳು, ಭಾರತೀಯರು ವಿಕೃತ ಹಿಂಸಾಚಾರವಾಗಿ ಪ್ರತಿಭಟನೆ ನಡೆಸಿಲ್ಲ. ಆದ್ರೆ ಪೈಗಂಬರ್ ಬಗ್ಗೆ ಹೇಳಿದ್ದನ್ನು ಸಹಿಸದೆ ಹಿಂಸಾತ್ಮಾಕವಾಗಿ ದುಷ್ಕೃತ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.

ಕರಾವಳಿಯಲ್ಲಿ ದೈವ ದೇವರುಗಳ ನಿಂದನೆಗೆ ಹಿಂದೂ ಧರ್ಮೀಯರೂ ಯಾವತ್ತೂ ಹಿಂಸಾಚಾರಕ್ಕೆ ಇಳಿದಿಲ್ಲ…! ದೇಶದಲ್ಲಿ ಆಗುವ ವಿಚಾರ ಬಿಟ್ಟಬಿಡಿ. ಕರಾವಳಿ ದೈವದೇವರುಗಳ ನೆಲಬೀಡು. ಇಲ್ಲಿ ಈ ಹಿಂದೆಯೂ ಮುಸ್ಲಿಂಮರು ದೈವದ ಗುಡಿ ಗೋಪುರಗಳನ್ನು ಅಪವಿತ್ರಗೊಳಿದ್ದರು. ದೈವಕ್ಕೆ ನಿಂದಿಸಿದ್ದರು. ಚಿತ್ರ ವಿಚಿತ್ರವಾಗಿ ದೇವರನ್ನು ತೋರಿಸಿದ್ದರು. ಆದರೆ ಈ ಬಗ್ಗೆ ಯಾರೂ ಕೂಡ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿಲ್ಲ. ಕಲ್ಲು ತೂರಲಿಲ್ಲ ಪೊಲೀಸರ ಮೇಲೆ ಕಲ್ಲೆಸೆದು ಸಾರ್ವಜನಿಕ ಆಸ್ಥಿಯನ್ನು ಹಾಳು ಮಾಡಲಿಲ್ಲ..!

ಮಹಮ್ಮದ್ ಪೈಗಂಬರ್ ವಿರುದ್ಧದ ಹೇಳಿಕೆ ಕಾರಣಕ್ಕೆ ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾ ಅವರ ಪರವಾಗಿ ಟ್ವಿಟ್ ಮಾಡಿದ್ದಕ್ಕೆ ಜೀವ ಬೆದರಿಕೆಗಳು ಬಂದಿವೆ ಎಂದು ಡಚ್ ಸಂಸದ, ‘ಪಾರ್ಟಿ ಫಾರ್ ಫ್ರೀಡಂ’ನ ಮುಖ್ಯಸ್ಥ ಗೀರ್ಟ್ ವೈಲ್ಡರ್ಸ್ ಹೇಳಿದ್ದಾರೆ.

ಇನ್ನು ಗೀರ್ಟ್ ವೈಲ್ಡರ್ಸ್ ‘ನಾನು ಭಾರತೀಯನೂ ಅಲ್ಲ ಹಿಂದುವೂ ಅಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವುದನ್ನು ಸಮರ್ಥಿಸುವುದು, ಪ್ರವಾದಿ ಬಗ್ಗೆ ಸತ್ಯ ಹೇಳುವುದು ಸರಿಯಲ್ಲ ಎಂಬ ವಾದವೇ ಜಾತ್ಯತೀತತೆಯ ಅರ್ಥ ಆಗಬಾರದು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವ ಸಂದರ್ಭದಲ್ಲಿ ನೂಪುರ್ ಶರ್ಮಾ ಪ್ರತಿಕ್ರಿಯಿಸಿರುವುದು ಸಂಪೂರ್ಣ ಸಮರ್ಥನೀಯ’ ಎಂದು ಗೀರ್ಟ್ ವೈಲ್ಡರ್ಸ್ ಹೇಳಿದ್ದರು.

- Advertisement -
spot_img

Latest News

error: Content is protected !!