Monday, June 30, 2025
Homeಕರಾವಳಿಉಡುಪಿಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಅಬ್ಬರ: ಕೊಲ್ಲೂರು ವ್ಯಾಪ್ತಿಯ ಜಡ್ಕಲ್, ಮುದೂರುನಲ್ಲಿ 10 ದಿನ ಶಾಲೆಗಳು ಬಂದ್

ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಅಬ್ಬರ: ಕೊಲ್ಲೂರು ವ್ಯಾಪ್ತಿಯ ಜಡ್ಕಲ್, ಮುದೂರುನಲ್ಲಿ 10 ದಿನ ಶಾಲೆಗಳು ಬಂದ್

spot_img
- Advertisement -
- Advertisement -

ಕೊಲ್ಲೂರು: ಜಡ್ಕಲ್, ಮುದೂರು ಪರಿಸರದಲ್ಲಿ ಡೆಂಗ್ಯೂ ಬಾಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮೇ 19 ರಿಂದ ಮುಂದಿನ 10 ದಿನಗಳ ಕಾಲ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಜಿಲ್ಲಾಧಿಕಾರಿ ಕೂರ್ಮಾ ರಾವ್ ಜೊತೆಗೆ ಡೆಂಗ್ಯೂ ಸಾಧಕ-ಬಾಧಕಗಳನ್ನು ಚರ್ಚಿಸಿದ ಬಳಿಕ ಜಿಲ್ಲಾಧಿಕಾರಿಗಳು 10 ದಿನಗಳ ರಜೆ ಘೋಷಿಸಿದ್ದಾರೆ ಎಂದು ಬೈಂದೂರು ಬಿಇಒ ಮಾಹಿತಿ ನೀಡಿದ್ದಾರೆ.

ಶಾಲಾ ಪರಿಸರ ಸಹಿತ ಪ್ರತೀ ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. 30 ಮೀ. ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಸುಕುಮಾರ ಶೆಟ್ಟಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!