- Advertisement -
- Advertisement -
ಉಡುಪಿ: ಕೋವಿಡ್ ಸಂದರ್ಭದಲ್ಲಿ ಖಾಸಗೀ ಬಸ್ ದರ ಹೆಚ್ಚಳವಾಗಿದ್ದು, ಇದೀಗ ಮರುಪರಿಷ್ಕರಣೆ ನಡೆಸಿ ಪ್ರಯಾಣಿಕರ ಹಿತ ಕಾಪಾಡುವಂತೆ ಆಗ್ರಹಿಸಿ ಆಗ್ರಹಿಸಿ ಬಸ್ ಪ್ರಯಾಣಿಕ, ಜನಪರ ಚಿಂತಕ ಶಿವ ಕುಮಾರ ಶೆಟ್ಟಿಗಾರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕೋವಿಡ್ ಇರುವ ಸಮಯದಲ್ಲಿ ಬಸ್ ಮಾಲೀಕರ ಹಿತಾಸಕ್ತಿಯನ್ನು ಮನಗಂಡು ಬಸ್ ದರ ಏರಿಸಲಾಗಿತ್ತು. ಏರಿಕೆ ದರ ಕೋವಿಡ್ ಸಂದರ್ಭ ಮಾತ್ರ ಅನ್ವಯವಾಗುವಂತೆ ಇತ್ತು. ಆದರೆ ಈಗಲೂ ಹೆಚ್ಚುವರಿ ಖಾಸಗಿ ಬಸ್ ದರವನ್ನು ವಸೂಲಿ ಮಾಡಲಾಗ್ತಿದೆ. ಆದ್ದರಿಂದ ಶೀಘ್ರವೇ ಖಾಸಗೀ ಬಸ್ ದರ ಮರುಪರಿಷ್ಕರಣೆ ಮಾಡಬೇಕೆಂದು ಜಿಲ್ಲಾಧಿಕಾರಿಯ ಬಳಿ ಮನವಿ ಮಾಡಿದ್ರು.
- Advertisement -