Friday, May 3, 2024
Homeತಾಜಾ ಸುದ್ದಿವಿಮೆಯ ಹಣಕ್ಕಾಗಿ ಸಾವಿನ ನಾಟಕ! ಕಾರಿಗೆ ಬೆಂಕಿ ಹಚ್ಚಿದ ಉದ್ಯಮಿ ಮಾಡಿದ್ದೇನು?

ವಿಮೆಯ ಹಣಕ್ಕಾಗಿ ಸಾವಿನ ನಾಟಕ! ಕಾರಿಗೆ ಬೆಂಕಿ ಹಚ್ಚಿದ ಉದ್ಯಮಿ ಮಾಡಿದ್ದೇನು?

spot_img
- Advertisement -
- Advertisement -

ಹರಿಯಾಣ: ಇಲ್ಲಿನ ಉದ್ಯಮಿಯೊಬ್ಬರು ತಮ್ಮ ವಿಮೆಯ ಹಣಕ್ಕಾಗಿ ತಾನೇ ಸಾವನ್ನಪ್ಪಿದ್ದಾಗಿ ಎಲ್ಲರನ್ನೂ ನಂಬಿಸಿರುವ ಘಟನೆ ಬೆಳಕಿಗೆ ಬಂದಿದೆಛತ್ತೀಸ್​ಘಡದ 35 ವರ್ಷದ ಉದ್ಯಮಿ ರಾಮ್ ಮೆಹರ್ 2 ಕೋಟಿ ರೂ. ವಿಮೆ ಮಾಡಿಸಿದ್ದ. ವಿಮೆಯ ಹಣಕ್ಕಾಗಿ ತನ್ನದೇ ಕಾರಿಗೆ ಬೆಂಕಿ ಹಚ್ಚಿ, ತಾನು ಸಾವನ್ನಪ್ಪಿದ್ದಾಗಿ ನಂಬಿಸಿದ್ದರು.
ಆದರೆ, ರಾಮ್ ಮೆಹರ್ ಕುಟುಂಬಸ್ಥರು ನೀಡಿದ ಮಾಹಿತಿಯಿಂದ ಅನುಮಾನಕ್ಕೊಳಗಾದ ಪೊಲೀಸರು ತನಿಖೆ ನಡೆಸಿದರು. ಆ ವೇಳೆ ಸತ್ಯಾಂಶ ಹೊರಬಿದ್ದಿದೆ. ತಾನು ಸಾವನ್ನಪ್ಪಿದರೆ ಮನೆಯವರಿಗೆ 2 ಕೋಟಿ ರೂ. ವಿಮೆಯ ಹಣ ಸಿಗುತ್ತದೆ ಎಂದು ಸಾವಿನ ನಾಟಕವಾಡಿದ್ದರು. ಬರ್ವಾಲ್​ದಲ್ಲಿ ಗ್ಲಾಸ್ ಡಿಸ್ಪೋಸಲ್ ಉದ್ಯಮ ನಡೆಸುತ್ತಿದ್ದ ರಾಮ್ ಮೆಹರ್ ಭಾರೀ ನಷ್ಟ ಅನುಭವಿಸಿದ್ದರು.

ತನಿಖೆ ವೇಳೆ ರಾಮ್ ಮೆಹರ್ ಸಾವನ್ನಪ್ಪಿಲ್ಲ. ಅವರು ಛತ್ತೀಸ್​ಘಡದ ಬಿಲಾಸ್ಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬುದು ಗೊತ್ತಾಗಿತ್ತು. ಇದೀಗ ಉದ್ಯಮಿಯನ್ನು ಹಿಸ್ಸಾರ್​ಗೆ ಕರೆತಂದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾಮ್ ಮೆಹರ್ ಅವರ ಕಾರಿನಲ್ಲಿದ್ದ ಶವ ಯಾರದ್ದು ಎಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆ ಬಗ್ಗೆ ಪೊಲೀಸರು ರಾಮ್ ಮೆಹರ್ ಅವರ ವಿಚಾರಣೆ ನಡೆಸುತ್ತಿದ್ದು, ಸತ್ಯಾಂಶ ಹೊರಬೀಳಬೇಕಿದೆ.

- Advertisement -
spot_img

Latest News

error: Content is protected !!