Friday, April 26, 2024
Homeಜ್ಯೋತಿಷ್ಯಶನಿವಾರದ ದಿನಭವಿಷ್ಯ: ಇಂದಿನ ಮೇಷ-ಮೀನದವರೆಗಿನ ರಾಶಿಫಲ, ನಿತ್ಯಪಂಚಾಂಗ ತಿಳಿಯೋಣ..

ಶನಿವಾರದ ದಿನಭವಿಷ್ಯ: ಇಂದಿನ ಮೇಷ-ಮೀನದವರೆಗಿನ ರಾಶಿಫಲ, ನಿತ್ಯಪಂಚಾಂಗ ತಿಳಿಯೋಣ..

spot_img
- Advertisement -
- Advertisement -

ಶನಿವಾರ- ರಾಶಿ ಭವಿಷ್ಯ ಫೆಬ್ರವರಿ-20,2021
ಸೂರ್ಯೋದಯ: 06:39 AM, ಸೂರ್ಯಸ್ತ: 06:25 PM
ಶಾರ್ವರೀ ನಾಮ ಸಂವತ್ಸರ
ಮಾಘ ಮಾಸ, ಶಿಶಿರ ಋತು, ಉತ್ತರಾಯಣ ,ಶುಕ್ಲ ಪಕ್ಷ,
ತಿಥಿ: ಅಷ್ಟಮೀ ( 13:32 )
ನಕ್ಷತ್ರ: ರೋಹಿಣಿ ( 32:43 )
ಯೋಗ: ವೈಧೃತಿ ( 29:14 )
ಕರಣ: ಬವ ( 13:32 )
ಬಾಲವ ( 26:41 )
ರಾಹು ಕಾಲ: 09:00 – 10:30
ಯಮಗಂಡ: 01:30 – 03:00

ಮೇಷ ರಾಶಿ
ಇಂದು ದೊಡ್ಡ ದೊಡ್ಡ ವಿಷಯಗಳನ್ನು ಬಿಟ್ಟುಕೊಂಡು ಸಣ್ಣವಿಷಯಗಳನ್ನು ದೊಡ್ಡದು ಮಾಡುವುದು ತರವಲ್ಲ. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಕುತೂಹಲವು ನಿಮಗೆ ಭ್ರಮ ನಿರಶನ ಮಾಡುವುದು. ಋಣಾತ್ಮಕ ಚಿಂತನೆಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ವೃಷಭ ರಾಶಿ
ಮನಸ್ಸಿನ ಸಮತೋಲನ ಕಾಪಾಡುವ ದೃಷ್ಟಿಯಿಂದ ಶಾಂತತೆ ಇರಲಿ. ಪರಾಕ್ರಮ ಹಾಗೂ ಧೈರ್ಯದ ಕೆಲಸದಲ್ಲಿ ಪ್ರಚಂಡ ದೊರೆಯುವುದು. ಬಂಧುಪ್ರೇಮ ಸ್ವಜನಪ್ರೇಮದಿಂದ ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಮನೆಯ ಶುಭಕಾರ್ಯಗಳಿಗೆ ಇಂದು ಮುಹೂರ್ತ ಉತ್ತಮವಿದೆ. ಶುಭ ಸುದ್ದಿಯೊಂದನ್ನು ಕೇಳುವಿರಿ.

ಮಿಥುನ ರಾಶಿ
ಮಹತ್ವಾಕಾಂಕ್ಷೆಯು ಬಹು ಪ್ರಯಾಸದಿಂದ ಈಡೇರುವುದು. ಸಮಾಜದಲ್ಲಿ ಕೆಲಸ ಕಾರ್ಯದಲ್ಲಿ ಮುಂದಾಳುತನ ವಹಿಸಿಕೊಳ್ಳುವಿರಿ. ಜನಾನುಕೂಲತೆಯಿಂದ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು. ಆರ್ಥಿಕ ಸಂಕಷ್ಠ ಪರಿಹಾರವಾಗುವುದು.

ಕರ್ಕಾಟಕ ರಾಶಿ
ಭಾಗ್ಯಬರುವ ಸಮಯದಲ್ಲಿ ಕೈಕೊಡುವುದರಿಂದ ಮಾನಸಿಕ ಜಿಗುಪ್ಸೆ ಉಂಟಾಗುವದು. ಧಾರ್ಮಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಕತ್ತಲಾದ ಮೇಲೆ ಬೆಳಕು ಆಗುವುದು ನಿರಾಶರಾಗಬೇಡಿರಿ.

ಸಿಂಹ ರಾಶಿ
ಮನಸ್ಸಿನ ಭಾವನೆಗಳಿಗೆ ಪೆಟ್ಟು ಬೀಳುವುದರಿಂದ ಭಾವಾವೇಶಕ್ಕೆ ಒಳಗಾಗುವಿರಿ. ಆಮೂಲಕ ನೀವು ಪ್ರತಿಕ್ರಿಯಿಸುವ ರೀತಿಯು ಬಂಧುಬಾಂಧವರ ನಡುವಿನ ಸಂಬಂಧಕ್ಕೆ ತೊಂದರೆ ಆಗುವುದು. ಆದಷ್ಟು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಕೌಟುಂಬಿಕ ನೆಮ್ಮದಿ ತನ್ನಿರಿ.

ಕನ್ಯಾ ರಾಶಿ
ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕಂತೆ ಹಣಕಾಸು ಒದಗಿ ಬರುವುದು. ಅದಾಗ್ಯೂ ಗುರುವಿನ ಅವಕೃಪೆಯಿಂದ ಸಣ್ಣಪುಟ್ಟ ಅಡೆತಡೆಗಳು ಎದುರಾಗುವ ಸಂಭವವಿರುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ. ಮನೆಯ ಹಿರಿಯರ ಸಲಹೆಯನ್ನು ಅಂಗೀಕರಿಸಿರಿ.

ತುಲಾ ರಾಶಿ
ಇಂದು ಉತ್ತಮ ದಿನವನ್ನಾಗಿ ಕಳೆಯುವಿರಿ. ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಿಮ್ಮದಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ಪ್ರಖ್ಯಾತ ಜನರ ಭೇಟಿ ಆಗಲಿದೆ. ಮನೋಕಾಮನೆಗಳು ಪೂರ್ಣಗೊಳ್ಳುವವು.

ವೃಶ್ಚಿಕ ರಾಶಿ
ಶಾರೀರಿಕ ಅಸ್ವಸ್ಥತೆಯು ಮನಸ್ಸಿನ ದುಗುಡವನ್ನು ಹೆಚ್ಚಿಸುವುದು. ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಹಾನಿಯಾಗುವ ಸಾಧ್ಯತೆಗಳು ಅಧಿಕ. ತಾಳ್ಮೆಯಿಂದ ಇರುವುದು ಒಳ್ಳೆಯದು. ಹನುಮಾನ್ ಚಾಲೀಸ್ ಪಠಣ ಮಾಡಿ.

ಧನಸ್ಸು ರಾಶಿ
ನಿಮ್ಮ ಬಾಳಸಂಗಾತಿಯು ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತಾರೆ, ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು ಇಲ್ಲವೆ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷ್ಮೀನಾರಸಿಂಹನ ಸ್ಮರಣೆ ಮಾಡಿ. ಬಂದ ದುರಿತಗಳು ನಶಿಸಿ ಹೋಗುವುದು.

ಮಕರ ರಾಶಿ
ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣ ಕಾಣುವಿರಿ, ಪ್ರಯಾಣದಲ್ಲಿ ಕೂಡಾ ಎಚ್ಚರದಿಂದ ಇರುವುದು ಒಳ್ಳೆಯದು. ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ.

ಕುಂಭ ರಾಶಿ
ಮನಸ್ಸು ಅತ್ಯಂತ ಚಂಚಲತೆಯಿಂದ ಕೂಡಿರುವುದರಿಂದ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ಗ್ರಹಸ್ಥಿತಿಗಳು ಉತ್ತಮವಾಗಿಲ್ಲ, ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ.

ಮೀನಾ ರಾಶಿ
ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು. ಸಂಗಾತಿಯೊಂದಿಗೆ ಮನೆಯಲ್ಲಿ ಅಧಿಕ ಖರ್ಚು ಮಾಡುವುದು. ವ್ಯಾಪಾರ ವ್ಯವಹಾರದಲ್ಲಿ ಶತ್ರುಗಳ ಅಡೆ ತಡೆ ಗಳು ಬರಬಹುದು. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ.

- Advertisement -
spot_img

Latest News

error: Content is protected !!