ಸೂರ್ಯ ಉದಯ ಬೆ.06.04/ ಸೂರ್ಯ ಅಸ್ತ ಸಾ.06.33
ಚಂದ್ರ ಉದಯ ಮ.12.16/ ಚಂದ್ರ ಅಸ್ತ ರಾ.1.28
ಪ್ಲವ ಸಂವತ್ಸರ / ಉತ್ತರಾಯಣ / ವಸಂತ ಋತು /ಚೈತ್ರ ಮಾಸ / ಶುಕ್ಲ ಪಕ್ಷ
ತಿಥಿ: ಅಷ್ಟಮಿ (ಸಾ.2.46) ನಕ್ಷತ್ರ:ಅಶ್ವಿನಿ 3ನೆ ಪಾದ ಯೋಗ: ಧೃತಿ
ಕರಣ: ಭದ್ರೆ ಮಳೆ ನಕ್ಷತ್ರ: ಅಶ್ವಿನಿ 3ನೆ ಪಾದ
ಮಾಸ: ಮೇಷ, ತೇದಿ: 06
ಮೇಷ:
ತುಂಬಾ ಚಟುವಟಿಕೆಯಿಂದ ಉತ್ಸಾಹವು ಮೂಡಿ ಬರಲಿದೆ. ನಿಮ್ಮ ಮಟ್ಟಿಗೆ ಅತೀ ಒಳ್ಳೆಯ ಸಮಯ. ಆದರೂ ಮನೆಯಲ್ಲಿ ಸಾಂಸಾರಿಕವಾಗಿ ನೆಮ್ಮದಿ ಇಲ್ಲವಾದೀತು. ಅತಿಥಿಗಳ ಭೇಟಿಯಿಂದ ಸಂತಸ.
ವೃಷಭ:
ವ್ಯವಹಾರಿಕವಾಗಿ ನಿಮ್ಮ ಪ್ರಯತ್ನ ಬಲಕ್ಕೆ ಹೆಚ್ಚಿನ ಲಾಭ ಕಂಡು ಬರಲಿದೆ. ಮನೆಯಲ್ಲಿ ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆಯು ಕಂಡು ಬರುವುದು. ಲಾಭವೂ ಉಂಟಾಗಲಿದೆ. ಆರೋಗ್ಯದಲ್ಲಿ ಕಿರಿಕಿರಿ ಇರುವುದು.
ಮಿಥುನ:
ಹೆಚ್ಚಿನ ಕಾರ್ಯಗಳು ಚಾಲನೆಗೆ ಬರಲಿದ್ದು ಮುಂದುವರಿಯಲು ಅವಕಾಶವು ಕಂಡು ಬರುವುದು. ಗೃಹ ನಿರ್ಮಾಣದ ಕಾರ್ಯ ಸಾಕಾರಗೊಳ್ಳಲು ಸ್ವಲ್ಪ ಕಾಲಾವಕಾಶಕ್ಕೆ ಕಾಯಬೇಕಾದೀತು. ಉದ್ವೇಗ ಬೇಡ.
ಕರ್ಕ:
ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನಗಳೆರಡರಲ್ಲೂ ಹಠಾತ್ ಪ್ರಗತಿಯು ತೋರಿ ಬಂದು ಲಾಭವಿರುವುದು. ನಿಮಗೆ ಸಿಹಿಕಹಿ ಎರಡೂ ಅನುಭವ ಬರುವುದು. ಆದರೆ ಲಾಭಾಂಶ ಹೆಚ್ಚಾಗಿರುವುದು.
ಸಿಂಹ:
ವ್ಯಾಪಾರಿಗಳಿಗೆ ದೈನಂದಿನ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯು ಕಂಡು ಬರುವುದು. ಹಲವು ಸಮಸ್ಯೆಗಳು ಎದುರಾಗಬಹುದು. ಆದರೂ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಲು ಕಲಿಯಿರಿ. ಮಾತಿಗಿಂತ ಮೌನ ಲೇಸು.
ಕನ್ಯಾ:
ನಿಮ್ಮ ಕಾರ್ಯಕ್ಷೇತ್ರದ ವ್ಯವಹಾರಗಳನ್ನು ತರಾತುರಿಯಿಂದ ಮುಗಿಸಲು ಸನ್ನದ್ಧರಾಗಿರುವಿರಿ. ನಿಮ್ಮ ಹಠ ಛಲ, ಉದ್ವೇಗವನ್ನು ಕಡಿಮೆ ಮಾಡಿದರೆ ಉತ್ತಮ. ಕೌಟುಂಬಿಕವಾಗಿ ಹಲವು ಖರ್ಚುಗಳು ಎದುರಾಗಬಹುದು.
ತುಲಾ:
ಸಾಮಾಜಿಕವಾಗಿ ಜನಪ್ರಿಯತೆ, ಗೌರವ, ಸ್ಥಾನಮಾನ ದೊರಕಲಿದೆ. ಕುಟುಂಬದಲ್ಲಿ ಶುಭಮಂಗಲ ಕಾರ್ಯದ ನಿಮಿತ್ತ ಓಡಾಟ ತಂದೀತು. ದೂರದ ಸಂಬಂಧಿಗಳ ನಿಮಿತ್ತ ನಿಮಗೆ ಲಾಭ ಕಂಡು ಬರುವುದು. ಶುಭವಿರುವುದು.
ವೃಶ್ಚಿಕ:
ಆರ್ಥಿಕ ಅಡಚಣೆಗಳು ದೂರವಾಗಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಆದರಿಂದ ಮನೆಯಲ್ಲಿ ಸಂತಸ ಸಮಾಧಾನವಿದೆ. ಅದೃಷ್ಟವು ತೂಗುಯ್ಯಾಲೆ ಆಡಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು.
ಧನು:
ಮನೆಯಲ್ಲಿ ನಿಮ್ಮ ವಿಚಾರವನ್ನು ಒಪ್ಪದೆ ಇದ್ದುದಕ್ಕೆ ಬೇಸರಿಸದೆ ತಿಳಿ ಹೇಳಿರಿ. ಅದಕ್ಕೆ ಒಪ್ಪುವರು. ವ್ಯಾಪಾರಿ ವರ್ಗಕ್ಕೆ ತುಂಬಾ ತಲೆಬಿಸಿಯ ಸಮಯವಾಗಿದೆ. ಲಾಭದಾಯಕ ಆದಾಯದಿಂದ ಸಂತಸ ಮೂಡೀತು.
ಮಕರ:
ಹೊಸ ವಾತಾವರಣಕ್ಕೆ ಒಗ್ಗಲು ಸ್ವಲ್ಪ ಕಷ್ಟವಾದೀತು. ಹಣದ ಮುಗ್ಗಟ್ಟು ಸ್ವಾಭಾವಿಕವಾಗಿರುವುದು. ಆತ್ಮವಿಶ್ವಾಸ ವನ್ನು ಬಲಪಡಿಸಿಕೊಳ್ಳಿರಿ. ಸಂಚಾರದಲ್ಲಿ ಜಾಗ್ರತೆ ಮಾಡಿರಿ. ಹಂತಹಂತವಾಗಿ ಅಭಿವೃದ್ಧಿ ಇರುವುದು.
ಕುಂಭ:
ವ್ಯವಹಾರಿಕವಾಗಿ ಕೊಡು-ಕೊಳ್ಳುವುದರಲ್ಲಿ ಲಾಭವನ್ನು ಪಡೆಯಲಿದ್ದೀರಿ. ವ್ಯವಹಾರ ಸಂಬಂಧಿತ ಹಾಗೂ ಉದ್ಯೋಗ ಸಂಬಂಧಿತ ಶುಭ ಸಮಾಚಾರ ಕೇಳಲಿದ್ದೀರಿ. ವಿದ್ಯಾರ್ಥಿಗಳ ಇಷ್ಟಾರ್ಥವು ಸಿದ್ದಿಸಲಿರುವುದು.
ಮೀನ:
ಸಾಮಾಜಿಕವಾಗಿ ನಿಮ್ಮ ಪ್ರಭಾವವು ಬೆಳೆಯಲಿದೆ. ಅದೃಷ್ಟಬಲವು ನಿಮ್ಮ ಪಾಲಿಗಿದೆ. ನಿಮ್ಮ ಎಣಿಕೆಗಳು ಈಡೇರುವುದರಿಂದ ಧೈರ್ಯದಿಂದ ಅಭಿವೃದ್ಧಿಯತ್ತ ದಾಪುಗಾಲು ಇಡಿರಿ. ಶುಭಮಂಗಲ ಕಾರ್ಯ ನಡೆದೀತು.