Friday, April 26, 2024
Homeಜ್ಯೋತಿಷ್ಯಶನಿವಾರದ ನಿತ್ಯಭವಿಷ್ಯ: ಈ ದಿನ ಯಾವ ರಾಶಿಗೆ ಯಾವ ಫಲ?

ಶನಿವಾರದ ನಿತ್ಯಭವಿಷ್ಯ: ಈ ದಿನ ಯಾವ ರಾಶಿಗೆ ಯಾವ ಫಲ?

spot_img
- Advertisement -
- Advertisement -

ಮೇಷ:
ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಕೆಟ್ಟ ಪರಿಣಾಮ ಬೀರದಂತೆ ಜಾಗ್ರತೆ ಮಾಡುವುದು ಅವಶ್ಯ. ನ್ಯಾಯಾಲಯದ ವಾದವಿವಾದಗಳು ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣಗಳು ತೋರಿಬರಲಾರದು. ಜಾಗ್ರತೆಯಿಂದ ಹೆಜ್ಜೆ ಇಡಿರಿ.

ವೃಷಭ:
ದೈವಾನುಗ್ರಹದ ಬಲದಿಂದ ಅನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದು ಅಚ್ಚರಿ ತರುವುದು. ಸಹೋದ್ಯೋಗಿಗಳ ದುರ್ವ್ಯವಹಾರಗಳು ಹಂತಹಂತವಾಗಿ ಗೋಚರಕ್ಕೆ ಬರುವುದು. ಎಷ್ಟು ನೋಡಿಕೊಂಡರೂ ಸಾಲದು.

ಮಿಥುನ:
ನಿಮ್ಮ ಎಚ್ಚರಿಕೆಯ ಹೆಜ್ಜೆಯು ಮುನ್ನಡೆಗೆ ಸಾಧಕವಾಗುವುದು. ಸಾಂಸಾರಿಕವಾಗಿ ನೆಮ್ಮದಿಯು ಗೋಚರಕ್ಕೆ ಬರುವುದು. ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಕಡೆ ತುಸು ಗಮನವೀಯಬೇಕಾದೀತು. ಮುನ್ನೆಡೆಯಿರಿ.

ಕಟಕ ರಾಶಿ :
ಸಂತೋಷದ ಒಳ್ಳೆಯ ದಿನ ಇಂದಾಗಿರಲಿದೆ. ಮನಸ್ಥಿತಿ ಬದಲಾವಣೆಯಿಂದ ತಪ್ಪು ಗ್ರಹಿಕೆ ದೂರಾಗಲಿದೆ. ಕೆಲಸದಲ್ಲಿ ಪ್ರಗತಿ. ಭವಿಷ್ಯಕ್ಕಾಗಿ ಸೃಜನಶೀಲ ಯೋಜನೆ ರೂಪಿಸಲು ಸಕಾಲ

ಸಿಂಹ ರಾಶಿ:
ಸ್ವಲ್ಪ ದ್ವಂದ್ವ ನಿಲುವು ಕಾಡಾಲಿದೆ. ಯಾವುದೇ ಮುಖ್ಯ ನಿರ್ಧಾರ ಇಂದು ಕೈ ಗೊಳ್ಳುವ ಬದಲು ಮುಂದೂಡಿ. ಈ ಚಂಚಲತೆ ನಿವಾರಣೆಗೆ ಶಿವನ ದೇವಾಲಯಕ್ಕೆ ಭೇಟಿ ನೀಡಿ

ಕನ್ಯಾ ರಾಶಿ:
ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆಯಿಂದ ನಷ್ಟ ಹೆಚ್ಚಲಿದೆ. ಈ ಹಿನ್ನಲೆ ಯಾವುದೇ ಬದಲಾವಣೆ ಮಾಡದೇ ಇರುವುದು ಒಳ್ಳೆಯದು. ಬೆಳಗಿನ ಸಮಯದಲ್ಲಿ ಸೂರ್ಯನಿಗೆ ಅರ್ಗ್ಯ ನೀಡಿ. ಗಣಪತಿ ದರ್ಶನ ಮಾಡಿ

ತುಲಾ:
ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಸುಧಾರಿಸುವುದರಿಂದ ಋಣಭಾದೆಯಿಂದ ಮುಕ್ತರಾಗುವಿರಿ. ಆರೋಗ್ಯದಲ್ಲಿ ಮಾತ್ರ ಹೆಚ್ಚಿನ ಜಾಗ್ರತೆ ಬೇಕಾದೀತು. ಸರಕಾರಿ ಕೆಲಸ ಕಾರ್ಯದಲ್ಲಿ ಸಿದ್ಧಿಯಾಗಲಿದೆ. ಸಂತಸವಿದೆ.

ವೃಶ್ಚಿಕ:
ಗೃಹದಲ್ಲಿ ಆಪ್ತೇಷ್ಟರ ಭೇಟಿಯಿಂದ ನಿಮ್ಮ ಕೆಲಸದಲ್ಲಿ ಉತ್ಸಾಹ ಮಿತಿಮೀರೀತು. ಸತ್ಕಾರ, ಸಮ್ಮಾನಗಳು ಲಭಿಸೀತು. ಅದರಿಂದ ಸ್ವಲ್ಪ ಖರ್ಚುಗಳೂ ಬಂದೀತು. ಹೊಸ ಉದ್ಯೋಗದ ಆರಂಭಕ್ಕೆ ಇದು ಸಕಾಲವಲ್ಲ.

ಧನು:
ಯಾವ ಕೆಲಸ ಕಾರ್ಯದಲ್ಲೂ ಆತುರತೆ ಸಲ್ಲದು. ದುಂದುವೆಚ್ಚಗಳು ಅತಿರೇಕವಾಗಿ ಒಮ್ಮೊಮ್ಮೆ ಆತಂಕಕ್ಕೆ ಕಾರಣವಾದೀತು. ಅನಾವಶ್ಯಕ ಅವಮಾನ, ಅಪಮಾನ ಪ್ರಸಂಗಗಳು ಎದುರಾದೀತು. ಕಾರ್ಯಕ್ಷೇತ್ರದಲ್ಲಿ ಎಚ್ಚರವಿರಲಿ.

ಮಕರ ರಾಶಿ:
ಉದ್ಯೋಗದಲ್ಲಿ ಸಾಕಷ್ಟು ವ್ಯತ್ಯಾಯ. ಏನೇ ಸಮಸ್ಯೆ ಎದುರಾದರೂ ಉದ್ವೇಗ ಬೇಡ ಇನ್ನೊಂದು ಎರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ. ಮಹಾಗಣಪತಿ ನೆನೆಯಿರಿ

ಕುಂಭ ರಾಶಿ:
ಆರೋಗ್ಯದಲ್ಲಿ ವೃದ್ಧಿ. ತೊಂದರೆಗಳನ್ನು ನಿರ್ಲಕ್ಷ್ಯಿಸದಿರಿ. ಇತರರನ್ನು ಮೆಚ್ಚಿಸಲು ಹಣ ವ್ಯಯ ಮಾಡದಿರಿ. ಕೆಲಸದಲ್ಲಿ ಹೊರಗಿನವರ ಹಸ್ತಕ್ಷೇಪದಿಂದ ಸಮಸ್ಯೆ ಉಂಟಾಗಲಿದೆ

ಮೀನಾ ರಾಶಿ:
ನಿಮ್ಮ ಕಾರ್ಯಕ್ಕೆ ಕುಟುಂಬಸ್ಥರು, ಸ್ನೇಹಿತರಿಂದ ಬೆಂಬಲ ಸಿಗಲಿದೆ. ತೃಪ್ತಿದಾಯಕ ದಿನ ಇಂದು. ಒಳ್ಳೆಯ ಆಲೋಚನೆಗಳಿಂದಾಗಿ ಎಲ್ಲವೂ ಒಳಿತಾಗಲಿದೆ. ಗಣೇಶನ ಧ್ಯಾನ ಮಾಡಿ

- Advertisement -
spot_img

Latest News

error: Content is protected !!