- Advertisement -
- Advertisement -
ಸುಬ್ರಹ್ಮಣ್ಯ : ಇಲ್ಲಿನ ಪೆಟ್ರೋಲ್ ಬಂಕ್ ನಲ್ಲಿ ನಿನ್ನೆ ಮೊಸಳೆ ಮರಿಯೊಂದು ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಕುಮಾರಧಾರ ನದಿ ದಡದಿಂದ ಸ್ವಲ್ಪ ದೂರದಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಈ ಮೊಸಳೆ ಮರಿ ಪತ್ತೆಯಾಗಿದ್ದು, ಮಾಹಿತಿ ದೊರೆತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವ ಮೊದಲೇ ಮೊಸಳೆ ಮರಿ ನಾಪತ್ತೆಯಾಗಿದೆ.
ಹಿಂದೆಯೂ ಕುಮಾರಧಾರ ನದಿಯಲ್ಲಿ ಮೊಸಳೆಗಳು ಇವೆ ಎಂದು ಹೇಳಲಾಗುತಿತ್ತು. ಆದರೆ ಈಗ ಆ ಮಾತು ನಿಜವಾಗಿದೆ. ಕುಮಾರಧಾರಾ ನದಿ ಸ್ನಾನಘಟ್ಟದ ಬಳಿ ಮೊಸಳೆ ಮರಿ ಪತ್ತೆಯಾಗಿರುವುದು ಭಕ್ತರನ್ನು ಆತಂಕಕ್ಕೀಡುಮಾಡಿದ್ದು, ನದಿಯಲ್ಲಿ ದೊಡ್ಡ ಮೊಸಳೆಗಳು ಇರುವ ಶಂಕೆ ವ್ಯಕ್ತವಾಗಿದೆ.
- Advertisement -