Saturday, May 4, 2024
Homeಕರಾವಳಿಉಡುಪಿಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ, ಪ್ರಕರಣ ದಾಖಲು

ಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ, ಪ್ರಕರಣ ದಾಖಲು

spot_img
- Advertisement -
- Advertisement -

ಕುಂದಾಪುರ: ಉಪ್ಪಿನ ಕುದ್ರುವಿನ ಮಧುಕರ ಶೇರೆಗಾರ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿಕೊಂಡಿರುವ ಬಗ್ಗೆ ರಾಧಾಕೃಷ್ಣ ಶೇರೆಗಾರ ಸೇರಿದಂತೆ 8 ಮಂದಿಯ ವಿರುದ್ಧ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .

ಮಧುಕರ ಶೇರೆಗಾರ ಅವರ ಅಜ್ಜ ಶಂಕರ ಶೇರೆಗಾರ ಅವರಿಗೆ ಸಂಬಂಧಿಸಿದ ಉಪ್ಪಿನಕುದ್ರುವಿನ 19 ಎಕ್ರೆ ಜಾಗವು ಅವರ ಸಾವಿನ ನಂತರ ಮಧುಕರ ಶೇರೆಗಾರ ಅವರಿಗೆ ಸೇರಬೇಕಿತ್ತು.

ಆದರೆ ಈ ಜಾಗವನ್ನು ಅವರಿಗೆ ಯಾವುದೇ ರೀತಿಯ ಸಂಬಂಧಪಡದ ಉಪ್ಪಿನಕುದ್ರುವಿನ ರಾಧಾಕೃಷ್ಣ ಶೇರೆಗಾರ ಎಂಬಾತ ತನ್ನ ಹೆಂಡತಿ ಮಾಲತಿ ಹಾಗೂ ಮಗ ಅಜಿತ್ ಕುಮಾರ್ ಹೆಸರಿಗೆ ಪರಭಾರೆ ಮಾಡಿದ್ದು , ಈ ಕೃತ್ಯಕ್ಕೆ ಇತರ ಆರೋಪಿಗಳಾದ ಉಪ್ಪಿನಕುದ್ರುವಿನ ದೇವರಾಯ ಪೂಜಾರಿ , ಶೇಖರ ಪೂಜಾರಿ , ಆನಂದಭಂಡಾರಿ ಹಾಗೂ ವಕೀಲರಾದ ಕುಂದಾಪುರದ ಅಚ್ಯುತ ಮತ್ತು ಶಂಕರ ಶೇರೆಗಾರ ಇವರನ್ನು ಸಾಕ್ಷೀದಾರರನ್ನಾಗಿಸಿ ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ ಎನ್ನಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!