ಬೆಳ್ತಂಗಡಿ: 27-2-2022 ರಂದು ಮುರುಘೇಂದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ ಇಲ್ಲಿ ಕರಾಟೆ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಜರಗಿತು. ದೀಪ ಪ್ರಜ್ವಲಿಸುವ ಮೂಲಕ ತರಬೇತಿಗೆ ಪಿಲಾತ್ತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಹರ್ಷಿಣಿ ಪುಷ್ಪಾನಂದ ರವರು ಚಾಲನೆ ನೀಡಿದರು. 2022ರ ಸಾಧಕ ವಿಧ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ರೀ ತುಂಗಪ್ಪ ಬಂಗೇರ ರವರು ಶುಭಹಾರೈಸಿದರು. ಗ್ರಾ.ಪಂ.ಸದಸ್ಯೆ ಶ್ರೀಮತಿ ಪುಷ್ಪಲತಾ ಮೋಹನ್,
ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ,ಪುಂಜಾಲಕಟ್ಟೆ ಠಾಣೆ ಉಪನಿರೀಕ್ಷಕರು ಸುತೇಶ್ ಕೆ ಪಿ, ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ಶಾಜು ಮುಲಾವನ ಶಿಕ್ಷಕರಾದ ಅಶೋಕ ಆಚಾರ್ಯ ,ಜೋಕಿಂ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದು ತರಬೇತಿ ತರಗತಿಗೆ ಶುಭ ಹಾರೈಸಿದರು. ಕರಾಟೆ ಸಂಸ್ಥೆಯ ಕರಾಟೆ ಶಿಕ್ಷಕರುಗಳಾದ ಮಿಥುನ್ ರಾಜ್,ದೇವರಾಜ್,ಸಿಂಚನ ಎಂ.ಡಿ, ನೋಣಯ್ಯ ಹಾಗೂ ವಿಧ್ಯಾರ್ಥಿಗಳು, ಪೋಷಕರು ಹಾಗೂ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸದಸ್ಯರು,ಮುರುಘೇಂದ್ರ ಮಿತ್ರ ಮಂಡಳಿಯ ಸದಸ್ಯರು ಉಪಸ್ಥಿತಿ ಇದ್ದರು.ಪೂಜಾ ಕೆ ಎಸ್ ಸ್ವಾಗತಿಸಿ ಸಿಂಚನ ಎಂ.ಡಿ ವಂದಿಸಿದರು ಕರಾಟೆ ಶಿಕ್ಷಕ ಅಶೋಕ ಆಚಾರ್ಯ ಕಾರ್ಯಕ್ರಮ ನಿರೂ