Friday, April 26, 2024
Homeಚಿಕ್ಕಮಗಳೂರುಚಿಕ್ಕಮಗಳೂರು; ಹಸುಗಳ ಪ್ರಾಣಕ್ಕೆ ಕುತ್ತಾಯ್ತಾ ಜೆಡಿಎಸ್ ಪಂಚರತ್ನ ಯಾತ್ರೆ?

ಚಿಕ್ಕಮಗಳೂರು; ಹಸುಗಳ ಪ್ರಾಣಕ್ಕೆ ಕುತ್ತಾಯ್ತಾ ಜೆಡಿಎಸ್ ಪಂಚರತ್ನ ಯಾತ್ರೆ?

spot_img
- Advertisement -
- Advertisement -

ಚಿಕ್ಕಮಗಳೂರು; ಹಸುಗಳ ಪ್ರಾಣಕ್ಕೆ ಕುತ್ತಾಯ್ತಾ ಜೆಡಿಎಸ್ ಪಂಚರತ್ನ ಯಾತ್ರೆ ಅನ್ನೋ ಪ್ರಶ್ನೆ ಇದೀಗ ಉದ್ಭವವಾಗಿದೆ. ಈ ಪ್ರಶ್ನೆ ಹುಟ್ಟಿಕೊಳ್ಳೋಕೆ ಕಾರಣ ಮೂರು ದಿನಗಳ ಪಂಚರತ್ನ ಯಾತ್ರೆ ಎಫೆಕ್ಟ್ ನಿಂದಾಗಿ ಎರಡು ಹಸುಗಳು ದಾರುಣ ಸಾವನ್ನಪ್ಪಿವೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ಪಂಚರತ್ನ ಯಾತ್ರೆ ವೇಳೆ ಉಳಿದ ಊಟ, ಪ್ಲಾಸ್ಟಿಕ್ ತಿಂದು ಹಸುಗಳು ಸಾವನ್ನಪ್ಪಿವೆ. ಕುಮಾರಸ್ವಾಮಿಯ ಪಂಚರತ್ನ ಯಾತ್ರೆಯಿಂದ ನಮ್ಮ ಹಸುಗಳು ಸಾವಿಗೀಡಾಗಿವೆ ಎಂದು ರೈತರು ಆರೋಪಿಸಿದ್ದಾರೆ.ಬದುಕಿಗೆ ಆಧಾರವಾಗಿದ್ದ ಹಸುವನ್ನ ಕಳೆದುಕೊಂಡು ರೈತರು ಕಣ್ಣೀರಿಟ್ಟಿದ್ದಾರೆ.

ವೈಕುಂಠಪುರದಲ್ಲಿ ಗ್ರಾಮ ಕುಮಾರಸ್ವಾಮಿ ವಾಸ್ತವ್ಯ ಮಾಡಿದ್ದರು. ಇಲ್ಲಿ 2000 ಜನಕ್ಕೆ ಅಡುಗೆ ಮಾಡಿಸಿದ್ದರು,  1000 ಜನ ಊಟ ಮಾಡಿದ್ದರು. ಅವರೆಲ್ಲಾ ಉಳಿದ ಊಟ, ಪ್ಲಾಸ್ಟಿಕ್ ಎಲ್ಲವನ್ನೂ ಕಾಡಿಗೆ ಬಿಸಾಡಿದ್ದರು.ಅನ್ನ, ಪ್ಲಾಸ್ಟಿಕ್ ಎಲ್ಲವನ್ನೂ ತಿಂದು ಎರಡು ಹಸುಗಳ ಸಾವನ್ನಪ್ಪಿವೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

- Advertisement -
spot_img

Latest News

error: Content is protected !!