Wednesday, May 15, 2024
Homeಕರಾವಳಿಪುತ್ತೂರು: ಮೇಯಲು ಬಿಟ್ಟ ದನ ಮತ್ತು ಕರು ನಾಪತ್ತೆ; ಕಾರಿನಲ್ಲಿ ಅಪಹರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆ

ಪುತ್ತೂರು: ಮೇಯಲು ಬಿಟ್ಟ ದನ ಮತ್ತು ಕರು ನಾಪತ್ತೆ; ಕಾರಿನಲ್ಲಿ ಅಪಹರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆ

spot_img
- Advertisement -
- Advertisement -

ಪುತ್ತೂರು: ಮನೆಯ ಸಮೀಪದ ಜಾಗದಲ್ಲಿ ಮೇಯಲೆಂದು ಬಿಟ್ಟ ದನ ಮತ್ತು ಎರಡು ಕರುಗಳನ್ನು ಕಾರಿನಲ್ಲಿ ಅಪಹರಿಸಿರುವ ಘಟನೆ ಪುತೂರಿನ ಕೊಡಿಪ್ಪಾಡಿಯಲ್ಲಿ ನಡೆದಿದೆ.


ಕೊಡಿಪಾಡಿಯಲ್ಲಿ ಜನಾರ್ದನ ದೇವಸ್ಥಾನದ ಬಳಿಯ ಲಕ್ಷ್ಮಣಗೌಡ ರವರ ಮನೆಯಲ್ಲಿ ಮೇಯಲೆಂದು ಬಿಟ್ಟ ದನ ಹಾಗೂ ಕರುಗಳು ವಾಪಸ್ ಬಾರದೆ ಇದ್ದ ಕಾರಣ ಹಲವೆಡೆ ಹುಡುಕಾಟ ನಡೆಸಲಾಗಿತ್ತು. ಆದರೂ ಪತ್ತೆಯಾಗದ ನಿಟ್ಟಿನಲ್ಲಿ ಲಕ್ಷ್ಮಣಗೌಡ ರವರ ಪುತ್ರಿ ರಕ್ಷಿತಾ ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತದನಂತರವೂ ಮನೆಯವರು ವಿವಿಧೆಡೆ ಹುಡುಕಾಡಿದ್ದರು. ಆದರೂ ದನ ಕರು ಪತ್ತೆಯಾಗಿರಲಿಲ್ಲ. ಇದೀಗ ಸ್ಥಳೀಯರು ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಸಿಸಿಟಿವಿಯನ್ನು ಪರಿಶೀಲಿಸಿದಾಗ ದನ ಮತ್ತು ಕರುಗಳನ್ನು ಕಾರೊಂದರಲ್ಲಿ ತುಂಬಿಸಿ ಅಪಹರಿಸಿರುವ ದೃಶ್ಯ ಕಾಣಸಿಕ್ಕಿದೆ. ದನಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಣಗೌಡರವರ ಮನೆಯವರು ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!