ಬೆಂಗಳೂರು: ರಾಜ್ಯದಲ್ಲಿ 378 ಜನರ ದೇಹಕ್ಕೆ ಕೋವಿಡ್-19 ಸೋಂಕು ಸೇರಿರುವುದು ಇಂದು ದೃಢವಾಗಿದೆ .ರಾಜ್ಯದಲ್ಲಿ ಇಂದು ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 121 ಜನರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಹೊಸ ಪ್ರಕರಣಗಳು ದೃಢಪಟ್ಟಿವೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ. ಇವರಲ್ಲಿ 1968 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3184 ಆಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಉಡುಪಿ-121, ಕಲಬುರ್ಗಿ – 69, ಯಾದಗಿರಿ-103, ಬೆಂಗಳೂರು ನಗರ -18, ರಾಯಚೂರು -02, ಮಂಡ್ಯ-03, ಬೆಳಗಾವಿ -05, ಬೀದರ್ -01, ಹಾಸನ-03, ವಿಜಯಪುರ-06, ದಾವಣಗೆರೆ -06, ದಕ್ಷಿಣ ಕನ್ನಡ -24, ಚಿಕ್ಕಬಳ್ಳಾಪುರ -02, ಉತ್ತರ ಕನ್ನಡ -02, ಧಾರವಾಡ -03, ಗದಗ -04, ತುಮಕೂರು -01, ಕೋಲಾರ -01, ಹಾವೇರಿ -03, ಕೊಪ್ಪಳ -01 ಕೊರೋನಾ ಸೋಂಕು ತಗಲುವ ಮೂಲಕ ಇಂದು 378 ಜನರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾದ್ರೇ, 1968 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 3184 ಆಗಿದೆ. ರಾಜ್ಯದಲ್ಲಿ ಇದುವರೆಗೆ ಕೊರೋನಾಗೆ 59 ಜನರು ಸಾವನ್ನಪ್ಪಿದ್ದಾರೆ.