Saturday, June 28, 2025
Homeತಾಜಾ ಸುದ್ದಿಮೂಕಪ್ರಾಣಿಯ ಮೇಲೆ ಮುಂದುವರಿದ ಮಾನವನ ಕ್ರೌರ್ಯ -ನಾಡ ಬಾಂಬ್ ತಿಂದು ನರಳಾಡಿ ಸತ್ತ ಹಸು!

ಮೂಕಪ್ರಾಣಿಯ ಮೇಲೆ ಮುಂದುವರಿದ ಮಾನವನ ಕ್ರೌರ್ಯ -ನಾಡ ಬಾಂಬ್ ತಿಂದು ನರಳಾಡಿ ಸತ್ತ ಹಸು!

spot_img
- Advertisement -
- Advertisement -

ಕೋಲಾರ : ಬಂಗಾರಪೇಟೆ ತಾಲೂಕಿನ ಹೊಸೂರಿನಲ್ಲಿ ಕಾಡು ಹಂದಿಯ ಬೇಟೆಗಾಗಿ ಇಟ್ಟಿದ್ದಂತ ನಾಡ ಬಾಂಬ್ ಅನ್ನು ಹಸುವೊಂದು ತಿಂದಿದ್ದರಿಂದಾಗಿ, ಅದರ ಬಾಯಿ ಚಿದ್ರಗೊಂಡು, ಗಂಭೀರವಾಗಿತ್ತು. ಕೊನೆಗೆ ನರಳಿ ನರಳಿ ಹಸು ಸಾವನ್ನಪ್ಪಿದೆ.

ಈ ಅಮಾನವೀಯ ಘಟನೆ ಕೋಲಾರದಲ್ಲಿ ವರದಿಯಾಗಿದ್ದು ಹಸು ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೇರಿದ್ದು ಮೇಯಲು ಹೋದಂತ ಸಂದರ್ಭದಲ್ಲಿ, ಕಾಡು ಹಂದಿ ಬೇಟೆಗಾಗಿ ಕೇಪ್ ಉಂಡೆ ಇಟ್ಟಿದ್ದನ್ನು ಹುಲ್ಲಿನೊಂದಿಗೆ ತಿಂದಿದೆ. ಹೀಗೆ ತಿಂದಿದ್ದರಿಂದಾಗಿ ಹಸುವಿನ ಬಾಯಿ ಚಿತ್ರಗೊಂಡು, ತೀವ್ರ ರಕ್ತಸ್ರಾವವಾಗಿ, ಸಾವನ್ನಪ್ಪಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಬಂಗಾರ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!