Sunday, April 28, 2024
Homeಕರಾವಳಿಕುಳಾಯಿ ಬಿಲ್ಲವ ಸಮುದಾಯದ ಮುಖಂಡ ಪಿ. ಸಾಧು ಪೂಜಾರಿ ನಿಧನ

ಕುಳಾಯಿ ಬಿಲ್ಲವ ಸಮುದಾಯದ ಮುಖಂಡ ಪಿ. ಸಾಧು ಪೂಜಾರಿ ನಿಧನ

spot_img
- Advertisement -
- Advertisement -

ಮಂಗಳೂರು: ಬಿಲ್ಲವ ಸಮುದಾಯದ ಮುಖಂಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿ. ಸಾಧು ಪೂಜಾರಿ ಇಂದು ನಿಧನರಾಗಿದ್ದಾರೆ.ಅವರು ಕಾಟಿಪಳ್ಳ ಶ್ರೀನಾರಾಯಣ ಗುರು ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕರಾಗಿದ್ದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ನಿಧನರಾಗಿದ್ದಾರೆ.

ಮಂಗಳೂರಿನಾದ್ಯಂತ ತಮ್ಮ ಸರಳ ಸಜ್ಜನಿಕೆಯ ಸ್ವಭಾವದಿಂದ ಜನಜನಿತರಾಗಿದ್ದ ಪಿ. ಸಾಧು ಪೂಜಾರಿ ಕುಳಾಯಿ ನಿವಾಸಿ. ಇವರು ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ ಪ್ರಸಿದ್ಧಿ ಹೊಂದಿದ್ದರು. ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಹುಟ್ಟೂರಿನಲ್ಲಿ ನೆರವೇರಲಿದೆ.

- Advertisement -
spot_img

Latest News

error: Content is protected !!