- Advertisement -
- Advertisement -
ಕಡಬ: ಬಹುಕಾಲದ ಬೇಡಿಕೆ ಕಡಬ ತಾಲೂಕು ಐತ್ತೂರು ಗ್ರಾಮದ “ಆಜನ” ಸೇತುವೆ ನಿರ್ಮಾಣಕ್ಕೆ ಸಚಿವ ಎಸ್.ಅಂಗಾರ ರವರು ಗುದ್ದಲಿ ಪೂಜೆ ನೆರವೆರಿಸಿದರು.
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಶಾಲಾ ಸಂಪರ್ಕ ಸೇತುವೆ ಯೋಜನೆಯಲ್ಲಿ ರೂ. 30 ಲಕ್ಷ ಅನುದಾನದಲ್ಲಿ ಸೇತುವೆ ನಿರ್ಮಾಣ ವಾಗಲಿದೆ , ಮಳೆಗಾಲದಲ್ಲಿ ಆ ಭಾಗದ ಜನರು ಅನುಭವಿಸುತ್ತಿದ್ದ ತೊಂದರೆಗೆ ಮುಕ್ತಿ ದೊರಕಲಿದ್ದು ಕಳೆದ ಕೆಲವು ದಶಕಗಳಿಂದ ಆ ಭಾಗದ ಜನರು ಗ್ರಾಮ ಸಭೆ, ಶಾಸಕರು, ಸಂಬಂಧ ಪಟ್ಟವರಲ್ಲಿ ಮನವಿ ಮಾಡುತ್ತಲೆ ಬಂದಿದ್ದರು.
ಈ ಸಂದರ್ಭ ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ, ಸತೀಶ್ ಪೂಜಾರಿ ಕೋಡೆಂಕಿರಿ, ನಾರಾಯಣ ಶೆಟ್ಟಿ ಅತ್ಯಡ್ಕ, ಮೆದಪ್ಪ ಗೌಡ, ತಮ್ಮಯ್ಯ ಗೌಡ, ಐತ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಸದಸ್ಯರು ಊರಿನ ಪ್ರಮುಖರು ಉಪಸ್ತಿತರಿದ್ದರು.
- Advertisement -