Friday, May 3, 2024
Homeಕರಾವಳಿಕಾಸರಗೋಡುಸ್ಕೂಟರ್ ನಲ್ಲಿ ಚಲಿಸುತ್ತಿದ್ದ ವೇಳೆ ತಗುಲಿದ ವಿದ್ಯುತ್ ತಂತಿ: ಕಾಂಗ್ರೆಸ್ ಮುಖಂಡ ಸಾವು

ಸ್ಕೂಟರ್ ನಲ್ಲಿ ಚಲಿಸುತ್ತಿದ್ದ ವೇಳೆ ತಗುಲಿದ ವಿದ್ಯುತ್ ತಂತಿ: ಕಾಂಗ್ರೆಸ್ ಮುಖಂಡ ಸಾವು

spot_img
- Advertisement -
- Advertisement -

ಕಾಸರಗೋಡು: ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಕಾಂಞ೦ಗಾಡ್ ನ ಮಣಿಯಾಟ್ ಎಂಬಲ್ಲಿ ನಡೆದಿದೆ. ಕಾಞ೦ಗಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ವಿ.ಬಾಲಕೃಷ್ಣನ್ (64) ಮೃತ ದುರ್ದೈವಿ.

ಬಾಲಕೃಷ್ಣನ್ ಅವರು ತಮ್ಮ ಮಗಳ ಮನೆಗೆ ತೆರಳುತ್ತಿದ್ದರು. ಸಂಜೆ ಭಾರೀ ಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಅದು ಈ ರಸ್ತೆಯಲ್ಲಿ  ಬರುತ್ತಿದ್ದ  ಬಾಲಕೃಷ್ಣ ಅವರ ಸ್ಕೂಟರ್‌ಗೆ ತಗುಲಿ ಈ ದುರ್ಘಟನೆ ನಡೆದಿದೆ. ಜೊತೆಗಿದ್ದ ಮೊಮ್ಮಗಳು ಅಪಾಯದಿಂದ ಪಾರಾಗಿದ್ದು. ಬಾಲಕೃಷ್ಣನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!