- Advertisement -
- Advertisement -
ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಇಂದು ಮಾಜಿ ಶಾಸಕ ಎ.ಜಿ. ಕೊಡ್ಗಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಎ.ಜಿ. ಕೊಡ್ಗಿ ಸೇರಿದಂತೆ ಉಮೇಶ್ ಕತ್ತಿ, ಎಂ. ರಘುಪತಿ, ಪ್ರಭಾಕರ್ ರಾಣೆ, ಯಾದವ್ ರಾವ್, ಕೆ. ಕೆಂಪೇಗೌಡ, ಜಿ.ವಿ. ಶ್ರೀರಾಮರೆಡ್ಡಿ, ಈಶಣ್ಣ ಗುಳಗಣ್ಣನವರ್, ಸಿ.ಎಂ. ದೇಸಾಯಿ ಮತ್ತು ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂತಾಪ ಸೂಚಿಸಲಾಯಿತು.
1972 ಮತ್ತು 1978 ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಎ.ಜಿ. ಕೊಡ್ಗಿ, ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದರು. ಕಳೆದ ಜೂನ್ 13 ರಂದು ಮಾಜಿ ಕೊಡ್ಗಿ ಎ.ಜಿ. ಕೊಡ್ಗಿ ನಿಧನರಾಗಿದ್ದರು.
- Advertisement -