- Advertisement -
- Advertisement -
ಮಡಿಕೇರಿ: ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂದು ವಿವಾದಕ್ಕೆ ಗುರಿಯಾಗಿರುವ ನಟ ಚೇತನ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಚೇತನ್ ವಿರುದ್ಧ ಎರಡು ದೂರುಗಳು ದಾಖಲಾಗಿದ್ದು, ಇದೀಗ ಮತ್ತೊಂದು ದೂರ ದಾಖಲಾಗಿದೆ.
ಮಡಿಕೇರಿಯ ಡಿವೈಎಸ್ಪಿಗೆ ಹಿಂದೂ ಯುವ ಸೇನೆನಟ ಚೇತನ್ ವಿರುದ್ಧ ದೂರು ನೀಡಿದೆ. ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲವೆನ್ನುವ ಟೀಕೆಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
- Advertisement -