Tuesday, May 7, 2024
Homeಕರಾವಳಿಉಡುಪಿಉಡುಪಿ: ಮೀನು ಮಾರಾಟ ಶೆಡ್ ತೆರವು ಪ್ರಕರಣ: ನಗರಸಭೆ ಸದಸ್ಯರ ನಡುವೆ ಜಟಾಪಟಿ

ಉಡುಪಿ: ಮೀನು ಮಾರಾಟ ಶೆಡ್ ತೆರವು ಪ್ರಕರಣ: ನಗರಸಭೆ ಸದಸ್ಯರ ನಡುವೆ ಜಟಾಪಟಿ

spot_img
- Advertisement -
- Advertisement -

ಉಡುಪಿ: ಕಿನ್ನಿಮೂಲ್ಕಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೀನು ಮಾರಾಟ ಶೆಡ್ ನ್ನು ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ನಗರ ಸಭೆ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ವಾಗ್ವಾದ ನಡೆಸಿದ್ರು. ಕಾಂಗ್ರೆಸ್ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮತ್ತು ರಮೇಶ್ ಕಾಂಚನ್ ಸಭೆಯಲ್ಲೇ ವಿಷಾದ ವ್ಯಕ್ತಪಡಿಸಿದರು.

ಐದು ದಿನಗಳ ಹಿಂದೆ ಕಿನ್ನಿಮೂಲ್ಕಿಯಲ್ಲಿ ಆರು ಮಂದಿ ಮೀನುಗಾರ ಮಹಿಳೆಯರಿಗೆ ಕಾಂಗ್ರೆಸ್ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಪತಿ ಕಟ್ಟಿಸಿಕೊಟ್ಟದ್ದ ಶೆಡ್ ನ್ನು ನಗರಸಭೆ ಏಕಾಏಕಿ ಕೆಡವಿತ್ತು. ಇದರ ಬಗ್ಗೆ ಇಂದಿನ ನಗರಸಭೆ ಮೀಟಿಂಗಲ್ಲಿ ತೀವ್ರ ಚರ್ಚೆ ನಡೆಯಿತು. ಕೊನೆಗೆ ಅನಧಿಕೃತ ಶೆಡ್ ನಿರ್ಮಾಣ ಮಾಡಿದ್ದಕ್ಕಾಗಿ ಕೈ ಸದಸ್ಯರು ವಿಷಾದ ವ್ಯಕ್ತಪಡಿಸಿದ್ರು.

- Advertisement -
spot_img

Latest News

error: Content is protected !!