Monday, May 6, 2024
Homeತಾಜಾ ಸುದ್ದಿಈ ಒಂದು ಕಾರಣಕ್ಕಾಗಿ ಚಿರು ಪುಣ್ಯತಿಥಿ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡ ಸರ್ಜಾ ಕುಟುಂಬ.

ಈ ಒಂದು ಕಾರಣಕ್ಕಾಗಿ ಚಿರು ಪುಣ್ಯತಿಥಿ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡ ಸರ್ಜಾ ಕುಟುಂಬ.

spot_img
- Advertisement -
- Advertisement -

ನಟ ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಅಗಲಿ ಏಳು ದಿನಗಳು ಕಳೆದರೂ ಕೂಡಾ ಅವರ ಮೇಲಿ‌ನ ಅಭಿಮಾನ ಹಾಗೂ ಪ್ರೀತಿ ಯಾವ ಮಟ್ಟಕ್ಕಿದೆ ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಚಿರು ಅವರ ಸುದ್ದಿಗಳು, ಫೋಟೋಗಳು, ವೀಡಿಯೋಗಳು ವೈರಲ್ ಆಗುತ್ತಿವೆ‌. ಅವರ ಸಾವು ಅಭಿಮಾನಿಗಳಿಗೆ ಮಾತ್ರವಲ್ಲ ಚಿತ್ರರಂಗಕ್ಕೆ ಕೂಡಾ ಭರಿಸಲಾರದ ಒಂದು ನಷ್ಟವಾಗಿದೆ.

ಇನ್ನು ಅವರ ಕುಟುಂಬದ ಪರಿಸ್ಥಿತಿ ಅಂತೂ ಹೇಳ ತೀರದು. ವಿಶೇಷವಾಗಿ ಅಣ್ಣನ ಮೇಲೆ ಅಪಾರವಾದ ಪ್ರೀತಿ ಹೊಂದಿದ್ದ ಧೃವ ಅವರ ನೋವು ಒಂದೆಡೆಯಾದರೆ, ಚಿರು ಅವರನ್ನು ಪ್ರೇಮಿಸಿ ಮದುವೆಯಾದ ಮೇಘನಾ ರಾಜ್ ಅವರ ವೇದನೆ ಇನ್ನೊಂದೆಡೆ ಎಲ್ಲರಲ್ಲೂ ಮರುಕ ಹುಟ್ಟಿಸಿದೆ. ಇದೆಲ್ಲದರ ನಡುವೆ ಸಾಂಪ್ರಾದಾಯಿಕವಾಗಿ ನಡೆಯಲೇ ಬೇಕಾದ ವಿಧಿ ವಿಧಾನಗಳ ಕಡೆಗೆ ಸರ್ಜಾ ಅವರ ಕುಟುಂಬ ಗಮನ ನೀಡಿದ್ದು, ಚಿರಂಜೀವಿ ಅವರ ತಿಥಿ ಕಾರ್ಯಕ್ಕೆ ಅವರ ಕುಟುಂಬ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಆದರೆ ಅದಕ್ಕೆ ಈ ಬಾರಿ ಅವರ ಕುಟುಂಬ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಮುಂದುವರೆಯಲಿದೆ ಎನ್ನಲಾಗಿದೆ. ಚಿರು ಅವರ ತಿಥಿ ಕಾರ್ಯವನ್ನು ಜೂನ್ 17 ಬುಧವಾರದಂದು, ಚಿರು ಅವರ ಅಂತ್ಯ ಸಂಸ್ಕಾರ ನಡೆದ ಕನಕಪುರ ರಸ್ತೆಯ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ನಡೆಯಲಿದ್ದು, ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಕುಟುಂಬ ವರ್ಗದವರು.

ಚಿರು ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕಾಯ್ದುಕೊಳ್ಳಬೇಕಾದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಆಗಿರಲಿಲ್ಲ. ಅಸಂಖ್ಯಾತ ಅಭಿಮಾನಿಗಳು ಅಂದು ಬಸವನ ಗುಡಿಯ ಕೆಆರ್ ರಸ್ತೆಯ ಮನೆ ಬಳಿ ಸೇರಿದ್ದರು‌. ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಪೋಲಿಸ್ ಇಲಾಖೆ ಸರ್ಜಾ ಅವರ ಕುಟುಂಬಕ್ಕೆ ಸೂಚನೆಯನ್ನು ನೀಡಿದೆ ಎನ್ನಲಾಗಿದೆ. ಆದ್ದರಿಂದಲೇ ತಿಥಿ ಕಾರ್ಯದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಮಂದಿ ಆಪ್ತರು ಮಾತ್ರ ಈ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!