ಚೆನ್ನೈನ ಕ್ಯಾಬ್ ಚಾಲಕನ ಖಾತೆಗೆ ಏಕಾಏಕಿ 9,000 ಕೋಟಿ ರೂಪಾಯಿ ಜಮೆಯಾಗಿದೆ. ಅಷ್ಟಕ್ಕೂ ಆಗಿದ್ದೇನು? ಗೊತ್ತಾ..
ಸೆ.9ರಂದು ತಮಿಳುನಾಡಿನ ಪಳನಿ ಮೂಲದ ರಾಜಕುಮಾರ್ ಎಂಬ ಕ್ಯಾಬ್ ಚಾಲಕನಿಗೆ ಎಸ್ಎಂಎಸ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಭಾರಿ ಮೊತ್ತದ ಠೇವಣಿ ಇದೆ ಎಂಬ ಬಗ್ಗೆ ಸಂದೇಶ ಬಂದಿತ್ತು.ರಾಜ್ಕುಮಾರ್ ಆರಂಭದಲ್ಲಿ ಇದು ತಮಾಷೆ ಎಂದು ಭಾವಿಸಿದ್ದರು.
ಬಳಿಕ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ರಾಜ್ಕುಮಾರ್ ತನ್ನ ಸ್ನೇಹಿತರಿಗೆ 21,000 ರೂ. ಕಳಿಸಿದರು. ಆಗ ಹಣ ಟ್ರಾನ್ಸ್ಫರ್ ಆಗಿದೆ. ಆ ಮೊತ್ತವನ್ನು ಬ್ಯಾಂಕ್ ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ ಎಂದು ರಾಜ್ಕುಮಾರ್ಗೆ ಅರಿವಾಯಿತು.
ಆದರೆ ಕೆಲವೇ ಹೊತ್ತಲ್ಲಿ ಅವರ ಸಂತೋಷ ಮುಗಿದೇ ಹೋಗಿತ್ತು.ಆದಾಗ್ಯೂ, ಬ್ಯಾಂಕ್ ಶೀಘ್ರದಲ್ಲೇ ಅವರ ಖಾತೆಯಿಂದ ಸಂಪೂರ್ಣ ಹಣವನ್ನು ಡೆಬಿಟ್ ಮಾಡಿದ್ದರಿಂದ ಅವರ ಸಂತೋಷವು ಅಲ್ಪಕಾಲಿಕವಾಗಿತ್ತು. ಇದು ಬ್ಯಾಂಕ್ ನಿಂದ ಆದ ಯಡವಟ್ಟು ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.