- Advertisement -
- Advertisement -
ಮಂಗಳೂರು: ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಹರೇಕಳದಲ್ಲಿ ಡಿವೈಎಫ್ ಐ ವತಿಯಿಂದ ಟಿಪ್ಪುಸುಲ್ತಾನ್ ಪ್ರತಿಮೆ ಸ್ಥಾಪಿಸಲಾಗಿದೆ..
ಹರೇಕಳದಲ್ಲಿರುವ ಡಿವೈಎಫ್ ಐ ಕಚೇರಿಯ ಬಳಿಯಲ್ಲಿ ಕಾರ್ಡ್ ಬೋರ್ಡ್ ನಿಂದ ನಿರ್ಮಿಸಲಾದ ಆರು ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಅನುಮತಿ ಇಲ್ಲದೇ ಅಳವಡಿಸಲಾಗಿದೆ.
ಫೆಬ್ರವರಿ 16 ರಿಂದ 17 ರ ನಡುವೆ ಈ ಕಾರ್ಡ್ ಬೋರ್ಡ್ ಪ್ರತಿಮೆ ಸ್ಥಾಪಿಸಲಾಗಿದ್ದು ಕೂಡಲೇ ತೆರವುಗೊಳಿಸುವಂತೆ ಪೊಲೀಸರು ನೋಟೀಸ್ ನೀಡಿದ್ದಾರೆ.
ಹರೇಕಳ ಡಿವೈಎಫ್ಐ ಅಧ್ಯಕ್ಷರಿಗೆ ಕೊಣಾಜೆ ಪೊಲೀಸ್ ಠಾಣೆಯಿಂದ ನೋಟೀಸ್ ನೀಡಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಪ್ರತಿಮೆ ತೆರವುಗೊಳಿಸಲು ಸೂಚಿಸಲಾಗಿದೆ.
- Advertisement -