- Advertisement -
- Advertisement -
ಕಾಸರಗೋಡು:ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿ ಬಾಲಕ ಸಾವನ್ನಪಿದ ಘಟನೆ ಕಾಸರಗೋಡಿನ ಚೆರೂರಿನಲ್ಲಿ ನಡೆದಿದೆ.
ಅಬ್ದುಲ್ ರಹಮಾನ್ ಮತ್ತು ಸಮೀನಾ ದಂಪತಿಯ ಪುತ್ರ ಮುಹಮ್ಮದ್ ರಫಾಲ್ (16) ಮೃತ ಬಾಲಕ.ರಫಾಲ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದ.
ಏಪ್ರಿಲ್ 30 ರಂದು ನೀರ್ಚಾಲು ಕನ್ಯಾಪ್ಪಾಡಿಯಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ರಫಾಲ್ ಗಂಭೀರವಾಗಿ ಗಾಯಗೊಂಡಿದ್ದ.ತಕ್ಷಣ ಬಾಲಕ ರಫಾಲ್ ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಮೃತಪಟ್ಟಿದ್ದಾನೆ.ಈ ಕುರಿತು ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -