- Advertisement -
- Advertisement -
ಹುಬ್ಬಳ್ಳಿ: ನನಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ.ಎಲ್.ಸಂತೋಷ್ ಅವ್ರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ನನ್ನನ್ನು ಕಡೆಗಣನೆ ಮಾಡಿ, ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಿರುವುದಕ್ಕೆ ಮೂಲ ಕಾರಣ ಬಿ.ಎಲ್.ಸಂತೋಷ್ ಆಗಿದ್ದಾರೆ. ಮಹೇಶ್ ಟೆಂಗಿನಕಾಯಿ ಬಿ.ಎಲ್ ಸಂತೋಷ್ ಅವರ ಮಾನಸ ಪುತ್ರ. ಬಿಎಲ್.ಸಂತೋಷ್ಗೆ ವ್ಯಕ್ತಿಯೇ ಮುಖ್ಯ ಹೊರತು ಪಕ್ಷ ಮುಖ್ಯವಲ್ಲ ಎಂದರು.
- Advertisement -