ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಫಿಕ್ಸ್ ಆಗಿದ್ದು, ವಿಜಯ ದಶಮಿ ಹಬ್ಬದ ಬಳಿಕ ಈ ಹೆಸರನ್ನು ಹೈಕಮಾಂಡ್ ಘೋಷಣ ಮಾಡಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಆಯ್ಕೆಯಾದರೇ ಅವರು ಈ ಬಾರಿ ಸಂಸದ ಸ್ಥಾನದ ಚುನಾವಣೆಗೆ ನಿಲ್ಲುವುದಿಲ್ಲ ಎನ್ನಲಾಗುತ್ತಿದ್ದು, ಉಡುಪಿ ಚಿಕ್ಕಮಗಳೂರಿನಿಂದ ಹೊಸಬರಿಗೆ ಸ್ಥಾನ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಿಎಸ್ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿ ಬಗ್ಗೆ ಟೀಕೆಗಳು ಕೂಡ ಕೇಳಿ ಬಂದಿದ್ದು, ಅವರ ಆಯ್ಕೆಗೆ ಪಾರ್ಟಿಯಲ್ಲಿ ಅಸಮಾಧಾನ ಮೂಡುವುದು ಸುಳ್ಳಲ್ಲ ಅಂತ ಬಿಜೆಪಿ ನಾಯಕರೇ ಹೇಳುತ್ತಿದ್ದಾರಂತೆ. ಇದಲ್ಲದೇ ಸಂಘಟನೆಗೆ ಬಂದರೆ ಈಗೀರುವ ನಳೀನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಇಬ್ಬರೂ ಕೂಡ ಹೇಳಿಕೊಳ್ಳುವ ರೀತಿಯಲ್ಲಿ ಪಾರ್ಟಿ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಲ್ಲವೂ ಕೂಡ ಬಿಎಸ್ವೈ ಹೆಸರಿನಲ್ಲಿ ಇಲ್ಲವೇ ಮೋದಿ ಹೆಸರಿನ ಮೇಲೆ ನಿರ್ಧಾರಿತವಾಗಿದೆ ಅಂತ ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.