Friday, May 17, 2024
Homeಕರಾವಳಿಉಳ್ಳಾಲ: ಹಠಾತ್ತನೇ ನಿಂತ ಬಸ್ಸಿನ ಹಿಂಬದಿಗೆ ಬೈಕ್ ಡಿಕ್ಕಿ, ಸವಾರರಿಬ್ಬರ ಸ್ಥಿತಿ ಗಂಭೀರ

ಉಳ್ಳಾಲ: ಹಠಾತ್ತನೇ ನಿಂತ ಬಸ್ಸಿನ ಹಿಂಬದಿಗೆ ಬೈಕ್ ಡಿಕ್ಕಿ, ಸವಾರರಿಬ್ಬರ ಸ್ಥಿತಿ ಗಂಭೀರ

spot_img
- Advertisement -
- Advertisement -

ಉಳ್ಳಾಲ: ಬಸ್ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಹಿನ್ನಲೆಯಲ್ಲಿ ಬಸ್ ನ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಘಟನೆಯ ವಿವರ
ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಉಚ್ಚಿಲ ಬಳಿ ಒಮ್ಮೆಲೇ ನಿಂತಿತು. ತಲಪಾಡಿ ಟೋಲ್ ನಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿಗಳು ಬೈಕ್ ನಲ್ಲಿ ಊಟಕ್ಕೆಂದು ಇದೇ ರಸ್ತೆಯಲ್ಲಿ ಬಸ್ ನ ಹಿಂಬದಿಯಿಂದ ತೆರಳುತ್ತಿದ್ದಾಗ ಮಳೆ ಬರುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಬಸ್ ಗೆ ಹಿಂದಿನಿಂದ ಢಿಕ್ಕಿಯಾಗಿದೆ.

ಗುದ್ದಿದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್ ನ ಅಡಿಗೆ ನುಗ್ಗಿದೆ. ಅಪಘಾತದಲ್ಲಿ ಬೈಕ್ ಸವಾರ ಆಂಧ್ರ ಮೂಲದ ಚಂದ್ರಶೇಖರ್ ರೆಡ್ಡಿ ಹಾಗು ಶಾನು ಬಾಜ್ಹ್ ಎಂಬವರು ಗಾಯಗೊಂಡಿದ್ದಾರೆ. ಚಂದ್ರಶೇಖರ್ ರೆಡ್ಡಿಯ ತಲೆಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಇಲ್ಲಿನ ಗ್ರಾಮಾಂತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!