- Advertisement -
- Advertisement -
ಬೆಳ್ತಂಗಡಿ : ಕೆಲಸ ಮುಗಿದ ರಾತ್ರಿ ಮನೆಗೆ ವಾಪಸ್ ಅಗುವಾಗ ಬೈಕ್ ಸ್ಕೀಡ್ ಅಗಿ ಸವಾರ ಸಾವನ್ನಪ್ಪಿದ್ದು ಸಹಸವಾರ ಸಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಶಾರದಾನಗರದಲ್ಲಿ ನಡೆದಿದೆ.
ಸೋಮದಡ್ಕದಿಂದ ಅದತ್ಯವಾರ ರಾತ್ರಿ ಹನ್ನೊಂದು ಗಂಟೆಗೆ ಕೆಲಸ ಮುಗಿಸಿ ಕಡುರುದ್ಯಾವರ ಮನೆಗೆ ವಾಪಸ್ ಬೈಕ್ನಲ್ಲಿ ಬರುತ್ತಿದ್ದಾಗ ಮುಂಡಾಜೆ ಗ್ರಾಮದ ಶಾರದಾ ನಗರದ ಬಳಿ ಬೈಕ್ ಸ್ಕೀಡ್ ಅಗಿ ಸವಾರ ಕಡುರುದ್ಯಾವರ ನಿವಾಸಿ ಯಶೋಧರ ದೇವಾಡಿಗ(30) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಸಹಸವಾರ ಕಡುರುದ್ಯಾವರ ನಿವಾಸಿ ಅಶೋಕ್ ಗೌಡ(32) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -