Friday, June 27, 2025
Homeತಾಜಾ ಸುದ್ದಿಕೊರೋನಾ ಕಷ್ಟದ ಸಮಯದಲ್ಲೂ ರಾಜ್ಯ ಸರ್ಕಾರದಿಂದ 2000 ಕೋಟಿ ರೂ ಅವ್ಯವಹಾರ: ಸಿದ್ದರಾಮಯ್ಯ

ಕೊರೋನಾ ಕಷ್ಟದ ಸಮಯದಲ್ಲೂ ರಾಜ್ಯ ಸರ್ಕಾರದಿಂದ 2000 ಕೋಟಿ ರೂ ಅವ್ಯವಹಾರ: ಸಿದ್ದರಾಮಯ್ಯ

spot_img
- Advertisement -
- Advertisement -

ಬೆಂಗಳೂರು: ಕೋವಿಡ್-19 ಚಿಕಿತ್ಸಾ ಉಪಕರಣಗಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಚಿವರು ಮತ್ತು ಅಧಿಕಾರಿಗಳು 2000 ಕೋಟಿ ರೂ ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಕೆಪಿಸಿಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ಕೊರೋನಾದಿಂದ ಜನತೆ ತೀವ್ರ ಆತಂಕ ಮತ್ತು ಸಂಕಷ್ಟದಲ್ಲಿದ್ದಾರೆ. ಜನತೆ ಬೀಬಿ ಬೀದಿಯಲ್ಲಿ ಹೆಣ ಹೊತ್ತು ತಿರುಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕ್ರಮ ನಡೆಸಲು ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಸುದ್ದಿಗೋಷ್ಠಿಯ ಪ್ರಮುಖಾಂಶ:

  • ಕೊವಿಡ್-19 ಉಪಕರಣ ಖರೀದಿಗೆ ಖರ್ಚು ಮಾಡಿದ್ದು 324 ಕೋಟಿ ಅಲ್ಲ 4167 ಕೋಟಿ ರೂ.
  • ಆರೋಗ್ಯ ಇಲಾಖೆಗೆ ಮೀಸಲಿರಿಸಿದ 1527 ಕೋಟಿಗಿಂತ ಎರಡು ಪಟ್ಟು ಹಣ ಖರ್ಚು
  • ಕೊವಿಡ್ ಉಪಕರಣ ಖರೀದಿಗಾಗಿ ಈವರೆಗೂ 3322 ಕೋಟಿ ರೂ. ಖರ್ಚು
  • ಕರ್ನಾಟಕದಲ್ಲಿ ಮಾರ್ಚ್.22ರಂದು ಒಂದು ವೆಂಟಿಲೇಟರ್ ಗೆ 5.60ಲಕ್ಷ, ಇನ್ನೊಂದು ಬಾರಿ ಒಂದು ವೆಂಟಿಲೇಟರ್ 12.36 ಲಕ್ಷ, ಮೂರನೇ ಬಾರಿ ಒಂದು ವೆಂಟಿಲೇಟರ್ ಖರೀದಿಗೆ 18.23 ಲಕ್ಷ ರೂಪಾಯಿ ನೀಡಿರುವ ಬಗ್ಗೆ ಆರೋಪ
  • 331 ರೂಪಾಯಿ ಮೌಲ್ಯದ ಪಿಪಿಇ ಕಿಟ್ ಗಳಿಗೆ 2317 ರೂಪಾಯಿ ನೀಡಿ ಖರೀದಿ
  • ಮೇಕ್ ಇನ್ ಇಂಡಿಯಾ ಭಾಷಣ ಮಾಡುವವರೇ ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಿದ್ದಾರೆ
  • ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಲು 94.22 ಕೋಟಿ ರೂಪಾಯಿ ಪಾವತಿ
  • 60 ರೂಪಾಯಿ ಮಾಸ್ಕ್ ಗೆ 150 ರೂಪಾಯಿ ಪಾವತಿಸಿ ಖರೀದಿ
  • 1 ರಿಂದ 2 ಸಾವಿರ ರೂಪಾಯಿ ಮೌಲ್ಯದ ಸ್ಕ್ಯಾನರ್ ಗಳ ಖರೀದಿಗೆ 5945 ರೂಪಾಯಿ ಖರ್ಚು
  • 80 ರಿಂದ 100 ರೂಪಾಯಿ ಮೌಲ್ಯದ 500 ಎಂಎಲ್ ಸ್ಯಾನಿಟೈಸರ್ ಗೆ 250 ರಿಂದ 600 ರೂಪಾಯಿ ಪಾವತಿ
  • ಕೇರಳ ಪಾವತಿಸಿದ ಹಣಕ್ಕಿಂತ 2 ಲಕ್ಷ ರೂಪಾಯಿ ಹೆಚ್ಚಿನ ಹಣಕ್ಕೆ 300 ಆಕ್ಸಿಮೀಟರ್ ಡಿವೈಸ್ ಖರೀದಿ. ಒಂದು ಆಕ್ಸಿಮೀಟರ್ ಗೆ 4.30 ಲಕ್ಷ ರೂಪಾಯಿ ಪಾವತಿ.
  • 2000 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ
  • ಫುಡ್ ಕಿಟ್ ವಿತರಣೆಯಲ್ಲೂ ಬಿಜೆಪಿ ಸರ್ಕಾರದಿಂದ ಅವ್ಯವಹಾರ
  • ಹೆಣದ ಮೇಲೆ ಹಣ ಮಾಡಲು ಹೊರಟಿದ್ದೀರಿ ಎಂದು ಡಿಕೆಶಿ ಕೆಂಡಾಮಂಡಲ.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಪಕ್ಷದ ನಾಯಕರಾದ ರಮೇಶ್ ಕುಮಾರ್,ವಿ.ಆರ್.ಸುದರ್ಶನ್,ವಿ.ಎಸ್.ಉಗ್ರಪ್ಪ ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!