Sunday, May 12, 2024
Homeಕರಾವಳಿಉಡುಪಿಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗ; ನಟ ಚೇತನ್ ಹೇಳಿಕೆಗೆ  ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು

ಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗ; ನಟ ಚೇತನ್ ಹೇಳಿಕೆಗೆ  ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು

spot_img
- Advertisement -
- Advertisement -

ಬೆಂಗಳೂರು: ಕರಾವಳಿಯ ಭೂತಾರಾಧನೆ ಕುರಿತು ಚಲನಚಿತ್ರ ನಟ ಚೇತನ್ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ, ಭೂತಾರಾಧನೆ ಹಿಂದೂ ಸಂಸ್ಕ್ರತಿಯ ಒಂದು ಭಾಗ ಎಂದು ಹೇಳಿದ್ದಾರೆ.

ನಾವು ಪಂಜುರ್ಲಿ, ನಂದಿ, ನಾಗದೇವರು, ಬೇರೆ ಬೇರೆ ದೈವಗಳನ್ನು ನಂಬುತ್ತೇವೆ. ನಮ್ಮ ಬದುಕಿನ ಒಂದು ಭಾಗವಾಗಿ ಭೂತಾರಾಧನೆ ಇದೆ, ನಾವೆಲ್ಲಾ ಹಿಂದೂಗಳು, ದೈವಗಳು‌ ನಮ್ಮ ಕಷ್ಟ ಪರಿಹರಿಸುತ್ತವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಮ್ಮ ನಂಬಿಕೆ ಆಧಾರದಲ್ಲಿ ಬೆಳೆದುಕೊಂಡು ಬಂದ ವ್ಯವಸ್ಥೆಗಳು ಇದಾಗಿದ್ದು, ಭೂತಾರಾಧನೆ ಮಾಡ್ತಿರುವ ನಾವು ಹಿಂದೂಗಳಾಗಿ ಇರುವವರು ಮತ್ತು ಹಿಂದೂಗಳಾಗಿ ಬದುಕುತ್ತಿರುವವರು ಎಂದಿರುವ ಸಚಿವರು, ನಾವು ಹಿಂದೂಗಳಲ್ಲ ಅಂದ್ರೆ ಅವರ ಹೇಳಿಕೆ ಶಾಸನ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಭೂತಾರಾಧನೆ ಹಿಂದೂ ಸಂಸ್ಕೃತಿಯ ಭಾಗವಾಗಿದ್ದು, ಕೋಲಾರಾಧನೆ ಹಿಂದೂ ಸಂಸ್ಕೃತಿಯ ಭಾಗವಾಗಿ ನಡೆದುಕೊಂಡು ಬಂದಿದೆ, ಮುಂದೆಯೂ ನಡೆಯಲಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!