ಬೆಳ್ತಂಗಡಿ: ಮಗಳನ್ನು ಮದುವೆ ಮಾಡಿಕೊಡಲು ಒಪ್ಪದ ಯುವತಿಯ ಅಪ್ಪನ ಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಲಾಯಿಲ ಪರಿಸರದಲ್ಲಿ ಇಂದು ನಡೆದಿದೆ. ಲಾಯಿಲ ಗ್ರಾಮ ಹಳೆಪೇಟೆಯ ವಿವೇಕಾನಂದನಗರ ನಿವಾಸಿ ಸೋಮನಾಥ ಕುಲಾಲ್ ಹಲ್ಲೆಗೊಳಗಾದ ವ್ಯಕ್ತಿ. ಕಡಬ ತಾಲೂಕಿನ ಕೈಕಂಬದ ದಿನೇಶ್ ಕುಲಾಲ್ ಹತ್ಯೆಗೆ ಯತ್ನಿಸಿದ ಆರೋಪಿ.
ಏನಿದು ಪ್ರಕರಣ
ಇಂದು ಬೆಳಿಗ್ಗೆ ಆರೋಪಿ ದಿನೇಶ್ ಆತನ ಬೈಕ್ ನಲ್ಲಿ ಸೋಮನಾಥ ಕುಲಾಲ್ ರ ಮನೆಯ ಬಳಿ ಬಂದು ಏಕಾಏಕಿ ಸಿಟೌಟ್ ಗೆ ನುಗ್ಗಿ, ಅಲ್ಲಿದ್ದ ಸೋಮನಾಥ ಕುಲಾಲ್ ರ ಹೆಂಡತಿ ಹಾಗೂ ಮಗಳನ್ನು ಕಂಡು “ಬೇವರ್ಸಿ ರಂಡೇ, ನನಗೆ ನಿನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವಾ, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಬ್ಯಾಗಿನಿಂದ ಮಂಡೆಕತ್ತಿಯೊಂದನ್ನು ತೆಗೆದು ಸೋಮನಾಥ ಕುಲಾಲ್ ರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.
ತಲೆಗೆ ಕದಿಯಲು ಯತ್ನಿಸಿದಾಗ ಅವರು ತಡೆಯುವ ವೇಳೆ ಎಡಕೈಯ ಅಂಗೈಗೆ ಸೀಳಿದ ರಕ್ತಗಾಯವಾಗಿದ್ದು ಅಲ್ಲದೇ ಬಿಡಿಸಲು ಬಂದ ಪಕ್ಕದ ಮನೆಯ ಮಹೇಶರವರಿಗೆ ಕೈಗೆ ತಾಗಿ ರಕ್ತಗಾಯವಾಗಿರುತ್ತದೆ. ಆ ಸಮಯ ಬೊಬ್ಬೆ ಕೇಳಿ ಇತರರು ಬರುವುದನ್ನು ಕಂಡು ಆರೋಪಿಯು “ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುವುದಾಗಿ ಜೀವಬೆದರಿಕೆಯೊಡ್ಡಿ ಪರಾರಿಯಾಗಿದ್ದ.
ಪ್ರಕರಣದ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ 448,504,307,324, 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದಿನೇಶ್ ಕುಲಾಲ್ ನನ್ನು ಬಂಧಿಸಲಾಗಿದೆ.