Tuesday, April 30, 2024
Homeಕರಾವಳಿ10 ನೇ ತರಗತಿಯ ಪರಿಷ್ಕೃತ ಪಠ್ಯ  ಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯ ವನ್ನು ತೆಗೆದು ಹಾಕಿರುವುದಕ್ಕೆ...

10 ನೇ ತರಗತಿಯ ಪರಿಷ್ಕೃತ ಪಠ್ಯ  ಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯ ವನ್ನು ತೆಗೆದು ಹಾಕಿರುವುದಕ್ಕೆ ವಿರೋಧ: ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಸುದ್ದಿಗೋಷ್ಠಿ

spot_img
- Advertisement -
- Advertisement -

ಬೆಳ್ತಂಗಡಿ :10 ನೇ ತರಗತಿಯ ಪರಿಷ್ಕೃತ ಪಠ್ಯ  ಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯ ವನ್ನು ತೆಗೆದು ಹಾಕಿರುವುದಕ್ಕೆ ವಿರೋಧಿಸಿ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಸುದ್ದಿಗೋಷ್ಠಿ ನಡೆಯಿತು.

ಈ ವೇಳೆ ಮಾತನಾಡಿದ ಬೆಳ್ತಂಗಡಿ  ಗುರುಮಾನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ ಬ್ರಹ್ಮಶ್ರೀ ನಾರಾಯಣಗುರು ಮತ್ತು ಪೆರಿಯಾರ್‌ ಅವರ ಜೀವನ ಚರಿತ್ರೆ ಹತ್ತನೇ ತರಗತಿಯ ಸಮಾಜ ವಿಜ್ಞಾನ   ಪಠ್ಯ ಪುಸ್ತಕದಿಂದ ಕೈಬಿಟ್ಟಿರುವ ಬಗ್ಗೆ ಪ್ರಾರಂಭವಾದ ಹೋರಾಟ ಆ ನಂತರದ ದಿನಗಳಲ್ಲಿ ಭಗತ್‌ಸಿಂಗ್ ಚರಿತ್ರೆ ಕೈ ಬಿಟ್ಟಿರುವುದು ಜೊತೆಯಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್‌ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪ ದೋಷಗಳ ಬಗ್ಗೆ ಲಿಂಗಾಯತರು, ಒಕ್ಕಲಿಗ ಸಮಾಜ ಮುಂತಾದ ಮೇಲ್ವರ್ಗಗಳ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದಾಗ ಎಚ್ಚರಗೊಂಡ ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಸಚಿವರು ಪ್ರಸ್ತುತ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಖರಣಾ ಸಮಿತಿ ವಿಸರ್ಜಿಸಿರುತ್ತಾರೆ. ಅಲ್ಲದೆ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಯಾವುದೇ  ಬದಲಾವಣೆ ಮಾಡಿರುವುದಿಲ್ಲ ಎಂದು  ಸರ್ಕಾರ ಹೇಳಿದ್ದು, ಆದರೆ ಈಗ ಪರಿಷ್ಕೃತ  ಪಠ್ಯ ಪುಸ್ತಕ  ಕೂಡ  ಹೊರ  ಬಂದಿರುತ್ತದೆ ಎಂದ್ರು.

ಆದರೆ ಪರಿಷ್ಕೃತ  ಪಠ್ಯ ಪುಸ್ತಕದಲ್ಲಿ ಹುಚ್ಚರ ಆಸ್ಪತ್ರೆಯಾಗಿದ್ದ ಕೇರಳದಲ್ಲಿ ಮೇಲ್ವರ್ಗದವರ ಅನಾಚಾರ, ದಬ್ಬಾಳಿಕೆಯಿಂದಾಗಿ ಮತಾಂತರವಾಗುತ್ತಿದ್ದ ಹಿಂದುಳಿದ ವರ್ಗಗಳಿಗೆ ಸ್ವರವಾಗಿ, ಶಕ್ತಿಯಾಗಿ ಅವರನ್ನು ಹಿಂದೂ ಧರ್ಮದಲ್ಲಿ ಉಳಿಸಿ ಕೇರಳವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ ಮಹಾನ್ ಸಂತ, ವಿದ್ಯೆಯ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟು ಕೇರಳದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಸಮಾಜದಉದ್ಧಾರಕ, ಹಿಂದುಳಿದ ವರ್ಗಗಳ ಉನ್ನತಿಯ ಹರಿಕಾರ, ಪರಮಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಎಲ್ಲ ವಿದ್ಯಾರ್ಥಿಗಳು ಅಧ್ಯಯನ ಮಾಡಲೇ ಬೇಕಾದ ಹತ್ತನೇ ಸಮಾಜ ವಿಜ್ನಾನ ಪಠ್ಯ ಪುಸ್ತಕದಿಂದ ತೆಗೆದು ವಿದ್ಯಾರ್ಥಿಗಳಿಗೆ ಐಚ್ಛಿಕವಾದ ಹತ್ತನೇ ತರಗತಿಯಕನ್ನಡ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿ ಈ ಸಮಾಜದ ಕಣ್ಣೊರೆಸುವ ತಂತ್ರ ಮಾಡಿರುತ್ತದೆ. ಇದನ್ನು ಯಾವತ್ತಿಗೂ ನಮ್ಮ ಸಮಾಜ ಒಪ್ಪುವುದಿಲ್ಲ ಎಂಬುದನ್ನು ಈ ಹಿಂದೆಯೇ ನಮ್ಮ ಸಮಾಜದ ಗಣ್ಯರು ಸ್ಪಷ್ಟವಾಗಿ ತಿಳಿಸಿತ್ತಾರೆ ಎಂದು ಹೇಳಿದ್ರು.

ಈ ದಿನದ ಪತ್ರಿಕೆಗಳನ್ನು  ಗಮನಿಸಿದಾಗ  ಮಾನ್ಯ  ಮುಖ್ಯ ಮಂತ್ರಿಗಳಾದ  ಬಸವರಾಜ  ಬೊಮ್ಮಾಯಿಯವರು ಪಠ್ಯ ಬದಲಾವಣೆ ಬಗ್ಗೆ  ಮುಕ್ತ  ಮನಸ್ಸು  ಹೊಂದಿರುವುದಾಗಿ  ಹೇಳಿಕೆ ನೀಡಿದ್ದು ಸದ್ರಿ ಹೇಳಿಕೆಯನ್ನು   ನಾವು ಗೌರವಪೂರ್ವಕವಾಗಿ ಸ್ವಾಗತೀಸುತ್ತೇವೆ. ಜೊತೆಗೆ ಮುಖ್ಯಮಂತ್ರಿಗಳಿಗೆ ನಾರಾಯಣಗುರುಗಳ  ಬಗ್ಗೆ  ನಿಜವಾಗಿ ಪ್ರಾಮಾಣಿಕಗೌರವ,  ಕಾಳಜಿ ಇದ್ದರೆ  ಈಗಾಗಲೇ ಬಿಡುಗೊಂಡಿರುವ ಹತ್ತನೇ ತರಗತಿಯ  ಸಮಾಜ ವಿಜ್ವಾನ  ಪುಸ್ತಕಕ್ಕೆ ಪೂರಕ  ಪಠ್ಯವಾಗಿಈ ಹಿಂದೆ ಇದ್ದ ನಾರಾಯಣ  ಗುರುಗಳ ಪಠ್ಯವನ್ನು ಪ್ರಕಟಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.  ಇಲ್ಲವಾದಲ್ಲಿ  ಈ ಬಗ್ಗೆ ಸಮಸ್ತ ಶೋಷಿತ ಸಮಾಜದಿಂದ ತಾವು ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಈ ಮೂಲಕ  ಎಚ್ಚರಿಕೆಯನ್ನು ಸಹ  ನೀಡುತ್ತಿದ್ದೇವೆ.

ಮೊನ್ನೆ ಮೊನ್ನೆ ದೆಹಲಿಯ ಜನವರಿ 26 ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧ ಚಿತ್ರದ ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಸಂದರ್ಭ ಗುರುಗಳಿಗೆ ಆಗಿರುವ ಅವಮಾನವನ್ನು ನಮ್ಮ ಸಮಾಜ ಇನ್ನೂ ಮರೆತಿಲ್ಲ. ಈಗ ಮತ್ತೊಮ್ಮೆ ಹಿಂದುಳಿದ ವರ್ಗಗಳ, ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಬರುವ ಬಿಲ್ಲವ, ಈಡಿಗ, ನಾಮಧಾರಿಯಾಗಿ 26 ಪಂಗಡಗಳನ್ನು ಒಳಗೊಂಡ ನಾರಾಯಣಗುರುಗಳನ್ನು ಆರಾಧಿಸಿಕೊಂಡು ಬರುತ್ತಿರುವ ಸಮಾಜದ ಅವಶ್ಯಕತೆ ಇಲ್ಲವೆಂದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಂತೆ ಕಾಣುತ್ತಿದೆ. ಆದ್ದರಿಂದ ಈಗ ಮತ್ತೊಮ್ಮೆ ಸರ್ಕಾರ ಹಾಗೂ ಶಿಕ್ಷಣ ಸಚಿವರಿಗೆ ಈ ಮೂಲಕ  ನಮ್ಮ ಸಂಘದ ಪರವಾಗಿ ಎಚ್ಚರಿಕೆ ಕೊಡುತ್ತಿದ್ದೇವೆ. ಸಮಾಜದ ಆಗ್ರಹದಂತೆ ಈ ಹಿಂದಿನಂತೆ 10 ನೇ ತರಗತಿಯ ಸಮಾಜ ವಿಜ್ಞಾನ  ಪಠ್ಯ ಪುಸ್ತಕದಲ್ಲಿಯೇ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಪ್ರಕಟಿಸಬೇಕು.ಇಲ್ಲದಿದ್ದಲ್ಲಿ ಈ ಬಗ್ಗೆ ನಮ್ಮ ಸಂಘದ ವತಿಯಿಂದ ಸೂಕ್ತ ಹೋರಾಟ ಹಮ್ಮಿಕೊಳ್ಳಲಾಗುವುದು. ಅದಕ್ಕೆ ಸರ್ಕಾರ ಆಸ್ಪದ  ನೀಡದೆ ಈಗ ಆಗಿರುವ  ಪ್ರಮಾದವನ್ನು ಸರಕಾರ ಸರಿಪಡಿಸಬೇಕೆಂದು ತಮ್ಮ  ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ರು.

- Advertisement -
spot_img

Latest News

error: Content is protected !!