- Advertisement -
- Advertisement -
ಬೆಳ್ತಂಗಡಿ: ಉಜಿರೆ ನಿಡಿಗಲ್ ಸೀಟು ಕಾಡು ಬಳಿ ರಿಡ್ಜ್ ಕಾರು ಮತ್ತು ಬೈಕ್ ನಡುವೆ ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಸಹಸವಾರ ಗಂಭೀರ ಗಾಯಗೊಂಡಿದ್ದಾರೆ.
ಬೈಕ್ ಸವಾರ ದಿಡುಪೆಯ ನೋಣಯ್ಯ ಗೌಡರ ಮಗ ಅನಂದ ಗಂಭೀರ ಗಾಯಗೊಂಡಿದ್ದು, ಉಜಿರೆ ಬೆನಕ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ, ಹಿಂಬದಿ ಸವಾರ ದಿಡುಪೆಯ ಚಿಂಕ್ರ ಗೌಡರ ಮಗ ಹರೀಶ್ ಗೆ ಕೂಡ ಗಾಯವಾಗಿದ್ದು ಅವರನ್ನು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವಾರ ಇದೆ ಸ್ಥಳದಲ್ಲಿ ಬಸ್ ಬೈಕ್ ನಡುವೆ ಅಪಘಾತ ನಡೆದು ಬೈಕ್ ಸವಾರ ಸಾವನ್ನಪ್ಪಿದ . ಈಗ ಎರಡನೇ ಪ್ರಕರಣ ನಡೆದಿರುವುದು.
- Advertisement -