- Advertisement -
- Advertisement -
ಪುತ್ತೂರು: ಇಲ್ಲಿನ ಕೆಯ್ಯೂರಿನಲ್ಲಿ ನಿನ್ನೆ ಶಾಲಾ ಬಾಲಕಿ ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಳು. ಶಾಲೆಗೆ ಹೋಗೋದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ವಿದ್ಯಾರ್ಥಿನಿ ಮನೆ ಸಮೀಪದ ಗೇರು ತೋಪಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆದರೆ ಇದೀಗ ಆಕೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ. ದಿವ್ಯಾ ಮುಖದ ಮೇಲಿದ್ದ ಮೊಡವೆಯಿಂದಾಗಿ ಆಕೆ ಸಾಕಷ್ಟು ನೊಂದಿದ್ದಳಂತೆ. ಅಲ್ಲದೇ ಮೊಡವೆಯಿಂದಾಗಿ ದಿವ್ಯಾ ಅವರು ಯಾರ ಮನೆಗೂ,ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ.ಶಾಲಾ ಆರಂಭವಾದರಿಂದ ಶಾಲೆಗೆ ಮೊಡವೆ ಹೊತ್ತ ಮುಖ ಹಿಡಿದುಕೊಂಡು ಹೇಗೆ ಹೋಗುವುದೆಂದು ಮನನೊಂದಿದ್ದಳು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ.
- Advertisement -