Saturday, May 18, 2024
Homeಇತರವಧುವಿನ ಸಪ್ತಪದಿ ತುಳಿಯುವ ಖುಷಿಗೆ ತಣ್ಣೀರೆರಚಿದ ಕೊರೊನಾ

ವಧುವಿನ ಸಪ್ತಪದಿ ತುಳಿಯುವ ಖುಷಿಗೆ ತಣ್ಣೀರೆರಚಿದ ಕೊರೊನಾ

spot_img
- Advertisement -
- Advertisement -

ಹಾವೇರಿ :  ಇನ್ನೇನ್ನು ಸಪ್ತಪದಿ ತುಳಿಯುದಕ್ಕೆ ರೆಡಿಯಾಗಿದ್ದ ವಧುವಿನ ಖುಷಿಗೆ ಹಾವೇರಿಯಲ್ಲಿ ಕೊರೊನಾ ತಣ್ಣೀರು ಎರಚಿದೆ. ಅಂದ್ಹಾಗೆ ಆಗಿದ್ದು ಏನಪ್ಪಾ ಅಂದ್ರೆ, ಹಾವೇರಿನ ನಾಗೇಂದ್ರನಮಟ್ಟಿಯಲ್ಲಿಂದು ಮದುವೆಯೊಂದು ನಿಗದಿಯಾಗಿತ್ತು. ವಧು ಹಾಗೂ ವರರ ಸಂಬಂಧಿಗಳು ಮದುವೆ ಮಂಟಪಕ್ಕೆ ಬಂದಿದ್ದಾರೆ.  ಆದರೆ ಇದೇ ಹೊತ್ತಲ್ಲೇ ವಧುನಿನ ಸಂಬಂಧಿ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಧು ಹಾಗೂ ವರನ ಕಡೆಯವರಿಗೆ ಮದುವೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಆರಂಭದಲ್ಲಿ ಮದುವೆ ಮಾಡಲು ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೇಳಿಕೊಂಡಿದ್ದಾರೆ. ಆದರೆ ಜಿಲ್ಲಾಡಳಿತದಿಂದ ಅನುಮತಿ ಸಿಕ್ಕಿಲ್ಲ. ಕೊನೆಗೂ ಜಿಲ್ಲಾಡಳಿತ ಮದುವೆಯನ್ನು ಮುಂದೂಡುವಲ್ಲಿ ಯಶಸ್ವಿಯಾಗಿದೆ. ಸಂಬಂಧಿ ಮಹಿಳೆಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳೆಯ ಜೊತೆಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿರುವ ವಧು ಸೇರಿದಂತೆ ಇತರ 19 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ

- Advertisement -
spot_img

Latest News

error: Content is protected !!