Wednesday, May 8, 2024
Homeಕರಾವಳಿಹಿರಿಯ ಪತ್ರಕರ್ತ ಎನ್.ಟಿ. ಗುರುವಪ್ಪ ಬಾಳೇಪುಣಿ ಅವರಿಗೆ ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ

ಹಿರಿಯ ಪತ್ರಕರ್ತ ಎನ್.ಟಿ. ಗುರುವಪ್ಪ ಬಾಳೇಪುಣಿ ಅವರಿಗೆ ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ

spot_img
- Advertisement -
- Advertisement -

ಬೆಂಗಳೂರು: ಮಾಧ್ಯಮ ಸಂವಹನ ಸಂಸ್ಥೆಯಾದ ವಿಶ್ವ ಸಂವಾದ ಕೇಂದ್ರದ ವತಿಯಿಂದ ವರ್ಷಂಪ್ರತಿ ನೀಡುವ ವಿ.ಎಸ್.ಕೆ. ಮಾಧ್ಯಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಹಿರಿಯ ಪತ್ರಕರ್ತ ಎನ್‌.ಟಿ. ಗುರುವಪ್ಪ ಬಾಳೇಪುಣಿ ಅವರಿಗೆ ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿದೆ.

ಜೂನ್ 26 ರಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್. ಇಂಜಿನಿಯರಿಂಗ್ ‌ಕಾಲೇಜಿನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಆರ್ ಎಸ್ ಎಸ್ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಮತ್ತು ಪ್ರಜ್ಞಾಪ್ರವಾಹದ ಕ್ಷೇತ್ರೀಯ ಸಂಯೋಜಕ ರಘುನಂದನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದಲ್ಲದೇ ಹಿರಿಯ ಪತ್ರಕರ್ತರಾದ ಚೀ.ಜ. ರಾಜೀವ ಅವರಿಗೆ ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿ, ದು.ಗು. ಲಕ್ಷ್ಮಣ್ ಅವರಿಗೆ ಹೂ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿ ಮತ್ತು ಡಾ. ಹೆಚ್.ಎಸ್. ಪ್ರೇಮಾ ಅವರಿಗೆ ವಿ.ಎಸ್.ಕೆ. ಡಿಜಿಟಲ್ ‌ಮಾಧ್ಯಮ ಪ್ರಶಸ್ತಿ ಘೋಷಿಸಲ್ಪಟ್ಟಿದೆ.

- Advertisement -
spot_img

Latest News

error: Content is protected !!