- Advertisement -
- Advertisement -
ಉಡುಪಿ : ಮಗುವನ್ನು ಎತ್ತಿ ಆಡಿಸುವಾಗ ಕೈ ಜಾರಿ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿಯ ಶಿವಪುರ ಗ್ರಾಮದ ಮುಳ್ಳುಗುಡ್ಡೆಯಲ್ಲಿ ನಡೆದಿದೆ.
ಜನತಾ ಕಾಲನಿಯ ಕೃಷ್ಣ -ಶಕುಂತಳಾ ದಂಪತಿಯ ಎರಡೂವರೆ ವರ್ಷದ ಸಾಕ್ಷಿ ಗಂಭೀರ ಗಾಯಗೊಂಡ ಮಗು.
ದಂಪತಿಯ ಮನೆಯ ಸಮೀಪದಲ್ಲಿ ಗುಡ್ಡದ ದೈವಕ್ಕೆ ತಂಬಿಲ ಇದ್ದ ಕಾರಣ ಸಂಬಂಧಿಕ ರಾಜು ಎಂಬುವರು ಬಂದಿದ್ದರು. ಮನೆಯ ಚಾವಡಿಯಲ್ಲಿ ಮಗು ಆಟವಾಡುತ್ತಿರುವಾಗ ರಾಜು ಮಗುವನ್ನು ಎರಡು ಕೈಯಿಂದ ಎತ್ತಿ ಆಡಿಸಿದ್ದಾರೆ. ಈ ವೇಳೆ ರಾಜು ಕೈಯಿಂದ ಮಗು ನೆಲಕ್ಕೆ ಜಾರಿ ಬಿದ್ದ ಪರಿಣಾಮವಾಗಿ ಮಗುವಿನ ಎಡ ಕಿವಿಯ ಬಳಿ ತೀವ್ರ ಸ್ವರೂಪದ ಗಾಯಗಳಾಗಿವೆ. ರಾಜು ನಿರ್ಲಕ್ಷೃದಿಂದ ಘಟನೆ ನಡೆದಿದೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -