- Advertisement -
- Advertisement -
ಉಡುಪಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಉಡುಪಿಯ ಆಟೋ ಚಾಲಕರೊಬ್ಬರು ಕಾಂತಾರ ಕನ್ನಡ ಚಲನಚಿತ್ರವನ್ನು ವಿಭಿನ್ನವಾಗಿ ಪ್ರಚಾರ ಮಾಡಿದ್ದಾರೆ.
ಕಾಂತರಾ ಸಿನಿಮಾ ಪ್ರಚಾರದ ಕಟಪಾಡಿಯ ಆಟೋ ಚಾಲಕ ಜಯಕರ್ ಹಬ್ಬವನ್ನು ಆಚರಿಸಿದ್ದಾರೆ.
ಪ್ರತಿ ವರ್ಷ ಆಯುಧ ಪೂಜೆಯ ದಿನ ವಿಶಿಷ್ಟವಾಗಿ ಆಟೋ ಅಲಂಕರಿಸುವ ಹವ್ಯಾಸ ಹೊಂದಿರುವ ಜಯಕರ್, ಕೋವಿಡ್ ಸಂದರ್ಭದಲ್ಲಿ ಕೋವಿಡ್ ಜಾಗೃತಿಗಾಗಿ ಆಟೋ ಅಲಂಕರಿಸಿ ಗಮನ ಸೆಳೆದಿದ್ದರು.
ಈ ಬಾರಿ ಕಾಂತಾರ ಸಿನಿಮಾದ ಪ್ರೇರಣೆಯಿಂದ ಕಾಡಿನ ಮಾದರಿಯಲ್ಲಿ ವಿಭಿನ್ನ ಅಲಂಕಾರ ಮಾಡಿದ್ದಾರೆ.
ಇದರ ಜೊತೆಗೆ ಇಂದು ಗ್ರಾಹಕರಿಗೆಲ್ಲಾ ಉಚಿತ ಪ್ರಯಾಣದ ವ್ಯವಸ್ಥೆಯನ್ನೂ ಕಲ್ಪಿಸಿದ್ದರು.
- Advertisement -