Wednesday, May 8, 2024
Homeಕರಾವಳಿಮಂಗಳೂರು:  ಕುಡಿದ ಮತ್ತಿನಲ್ಲಿ ಅಪಾರ್ಟ್ ಮೆಂಟ್ ಮುಂದೆ ಬಿಡಿಸಿದ್ದ ರಂಗೋಲಿ ಹಾಳುಗೆಡವಿದ ಯುವಕರು

ಮಂಗಳೂರು:  ಕುಡಿದ ಮತ್ತಿನಲ್ಲಿ ಅಪಾರ್ಟ್ ಮೆಂಟ್ ಮುಂದೆ ಬಿಡಿಸಿದ್ದ ರಂಗೋಲಿ ಹಾಳುಗೆಡವಿದ ಯುವಕರು

spot_img
- Advertisement -
- Advertisement -

ಮಂಗಳೂರು:  ಕುಡಿದ ಮತ್ತಿನಲ್ಲಿ ಯುವಕರು ಅಪಾರ್ಟ್ ಮೆಂಟ್ ಮುಂದೆ ಬಿಡಿಸಿದ್ದ ರಂಗೋಲಿ ಹಾಳುಗೆಡವಿದ  ಘಟನೆ  ಬಿಜೈಯಲ್ಲಿ ನಡೆದಿದೆ.

ಅಪಾರ್ಟ್‌ ಮೆಂಟ್‌ ವೊಂದರ ಮುಂಭಾಗ ದೀಪಾವಳಿ ಹಬ್ಬಕ್ಕಾಗಿ ರಂಗೋಲಿ ಬಿಡಿಸಲಾಗಿತ್ತು. ಹಬ್ಬದ ಶುಭಾಶಯವನ್ನು ರಂಗೋಲಿಯಲ್ಲಿ ಬರೆದಿದ್ದಾರೆ. ಈ ದೀಪಾವಳಿ ರಂಗೋಲಿಯನ್ನು ಕೇರಳ ಮೂಲದವರೆನ್ನಲಾದ ಕೆಲವು ವಿದ್ಯಾರ್ಥಿಗಳು ವಿರೂಪಗೊಳಿಸಿದ್ದಾರೆ ಎನ್ನಲಾಗಿದೆ.

ಒಬ್ಬ ಕೈಯಲ್ಲಿ ಮದ್ಯದ ಬಾಟಲಿಯನ್ನು ಹಿಡಿದುಕೊಂಡಿದ್ದಾನೆ, ಮತ್ತೊಬ್ಬ ರಂಗೋಲಿಯನ್ನು ಮೆಟ್ಟಿ, ಅದನ್ನು ವಿರೂಪಗೊಳಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ತಿಳಿದು ಬಂದಿದೆ.

ಶಾಸಕ ವೇದವ್ಯಾಸ್‌ ಕಾಮತ್‌ ಫೇಸ್‌ ಬುಕ್‌ ನಲ್ಲಿ ಈ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

- Advertisement -
spot_img

Latest News

error: Content is protected !!