- Advertisement -
- Advertisement -
ಕಡಬ; ಅನಾರೋಗ್ಯದಿಂದ ರಿಕ್ಷಾ ಚಾಲಕ ನಿಧನವಾಗಿರುವ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾತೃಮಾಡಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವಾಮನ ಗೌಡರವರ ಪುತ್ರ, ರಿಕ್ಷಾ ಚಾಲಕ ಬಾಲಕೃಷ್ಣ ಗೌಡ(35) ಮೃತ ದುರ್ದೈವಿ.
ಬಾಲಕೃಷ್ಣ ಗೌಡರವರಿಗೆ ಎರಡು ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಲೋ ಬಿಪಿಯಿಂದ ನಿಧನರಾದರೆಂದು ವರದಿಯಾಗಿದೆ.ಮೃತರು ತಂದೆ ವಾಮನ ಗೌಡ, ತಾಯಿ ಮೋಹಿನಿ, ಪತ್ನಿ ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
- Advertisement -