Saturday, May 4, 2024
Homeಕರಾವಳಿಪುತ್ತೂರು : ಯುವತಿ ವಿಚಾರಕ್ಕೆ ಯುವಕನಿಗೆ ತಂಡವೊಂದರಿಂದ ಹಲ್ಲೆ

ಪುತ್ತೂರು : ಯುವತಿ ವಿಚಾರಕ್ಕೆ ಯುವಕನಿಗೆ ತಂಡವೊಂದರಿಂದ ಹಲ್ಲೆ

spot_img
- Advertisement -
- Advertisement -

ಪುತ್ತೂರು : ಯುವತಿ ವಿಚಾರಕ್ಕೆ ಯುವಕನಿಗೆ ತಂಡವೊಂದು ಹಲ್ಲೆ  ಮಾಡಿರುವ ಘಟನೆ ಪುತ್ತೂರಿನ ಕುರಿಯ ಮಲಾ‌ರ್ ಎಂಬಲ್ಲಿ ನಡೆದಿದೆ.ಅಶ್ವಿತ್ ಕುಮಾರ್ ಹಲ್ಲೆಗೊಳಗಾದ ಯುವಕ. ಈ ಬಗ್ಗೆ ಅಶ್ವಿತ್ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅಶ್ವಿತ್ ಕುರಿಯ ಗ್ರಾಮದ ಮಲಾರ್ ಎಂಬಲ್ಲಿ ಕಟ್ಟಿಸಿದ ಹೊಸ ಮನೆಗೆ ಏ.3 ರಂದು ನೀರು ಹಾಕುತ್ತಿದ್ದ ದಾಗ ಸಚಿನ್ ಮುಕೈ ಎಂಬಾತ ಕರೆ ಮಾಡಿ, ನಿನ್ನಲ್ಲಿ ಮಾತನಾಡುವುದು ಇದೆ ಎಂದಿದ್ದಾನೆ.  ನಾನು ಮಲಾರ್‌ನಲ್ಲಿದ್ದು, ದರ್ಬೆಗೆ ಬರುವುದಾಗಿ ತಿಳಿಸಿ, ಮಲಾರ್‌ನಿಂದ ತನ್ನ ಬೈಕ್‌ನಲ್ಲಿ ಹೊರಟು ಆರ್ಯಾಪು ಗ್ರಾಮದ ಕಲ್ಲರ್ಪೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಸಚಿನ್ ಮುಕೈ ಹಾಗೂ ಇತರರು ಕಾರಿನಲ್ಲಿ ದರ್ಬೆ ಕಡೆಯಿಂದ ಬರುತ್ತಿದ್ದರು. ಅವರು  ಅಶ್ವಿತ್‌ ಬೈಕ್ ನಲ್ಲಿ ಬರೋದನ್ನು  ನೋಡಿ ಕಾರಿನ ಚಾಲಕ ಕೀರ್ತೇಶ್  ಬೈಕಿಗೆ ಕಾರನ್ನು ಅಡ್ಡ ಇಟ್ಟಿದ್ದಾನೆ. ಬಳಿಕ ಸಚಿನ್ ಮುಕ್ವೆ, ಅಂಕಿತ್ ಹಾಗೂ ಇತರ ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಕಾರಿನಿಂದ ಇಳಿದು ಬಂದು., ಅಶ್ವಿತ್ ಕುಮಾ‌ರ್ ಮತ್ತು ಯುವತಿ ಮಧ್ಯೆ ಇರುವ ಪ್ರೀತಿ ವಿಚಾರವಾಗಿ, ಆಕೆಯ ವಿಚಾರಕ್ಕೆ ಬಂದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಸಚಿನ್ ಹಾಗೂ ಅಂಕಿತ್ ಕೈಯಿಂದ ಹೊಡೆದಿದ್ದು, ಇಬ್ಬರು ಪರಿಚಯ ಇಲ್ಲದ ವ್ಯಕ್ತಿಗಳು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅಶ್ವಿತ್ ಅವರಿಂದ ತಪ್ಪಿಸಿಕೊಂಡು ಓಡಿದಾಗ, ಮುಂದಕ್ಕೆ ಹುಡುಗಿಯ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಶ್ವಿತ್ ಕುಮಾ‌ರ್ ನೀಡಿರುದ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!