- Advertisement -
- Advertisement -
ಬೆಳಗಾವಿ : ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ಶಾಖಾ ಮೂರುಸಾವಿರಮಠದ ಗಂಗಾಧರ ಸ್ವಾಮೀಜಿ ಅವರ ಕೊಲೆಗೆ ಯತ್ನ ಮಂಗಳವಾರ ತಡರಾತ್ರಿ ನಡೆದಿದೆ.
ಅದೇ ಗ್ರಾಮದ ವ್ಯಕ್ತಿ ಮಲ್ಲಿಕಾರ್ಜುನ ಬುಡಶೆಟ್ಟಿ ಎಂಬಾತ ಕೊಲೆ ಯತ್ನ ಮಾಡಿರುವ ಆರೋಪಿ.
ಶ್ರೀಗಳನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಠದಲ್ಲಿ ಕಳವು ಮಾಡಲು ಬಂದಾಗ ಶ್ರೀಗಳು ಪ್ರತಿರೋಧ ತೋರಿದ್ದಕ್ಕೆ, ಕಕ್ತಿಯಿಂದ ಕೊಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಲ್ಲಿಕಾರ್ಜುನ ಬಡಶೆಟ್ಟಿ ಎನ್ನುವವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
- Advertisement -